ಸಹವಾಸ ದೋಷ ??

ಹೊದ ವಾರ ಶಾಸ್ತ್ರಿ ಮಾರ್ಟೇಟ ನಲ್ಲಿ ರೇಖಾ ಆಂಟಿ ಮತ್ತು ಅವರ ಮಗ ಮಹೇಶ ಭೇಟಿ ಆಗಿದ್ರು. ಹೀಗೆ ಮಾತಾಡ್ತಾ, ಸಿದ್ದು ಮಹೇಶ ಗ ನೀನರೆ ಸ್ವಲ್ಪ ಹೇಳು ನನ್ ಮಾತ ಒಟ್ಟ ಕೇಳಲ್ಲ, ಓದೋದಿಲ್ಲ ಬರಿಯೋದಿಲ್ಲ, ಬರಿ ದೋಸ್ತ ರ ಜೋಡಿ ತಿರಗ್ತಾನ, ನಾಲ್ಕ ವರ್ಷ ಆಯ್ತು ಪಿಯುಸಿ ಪಾಸ್ ಅಗಿಲ್ಲ ಅಂತ ಅಂದ್ರು. ಮಹೇಶ ನ ಬಗ್ಗೆ ನನಗೆ ಸ್ವಲ್ಪ ಗೊತ್ತು , ಒಬ್ಬನೆ ಮಗ ಅಂತ ಮುದ್ದಿನಿಂದ ಬೆಳಿಸಿದಾರ, ಇತ್ತೀಚೆಗೆ ಸಿಗರೇಟ್ ಕುಡಿತ ಎಲ್ಲ ಕಲ್ತಿದಾನೆ. ಏನರೆ ಸ್ವಲ್ಪ ಹೇಳಬೇಕು ಅನ್ಕೊಂಡೆ ಆದರೆ ನಾನೆ ಇನ್ನೂ ಒಳ್ಳೆ ಪೋಜಿಷನನಲ್ಲಿ ಇಲ್ಲ ಅವನಿಗಿ ಎಲ್ಲಿ ಬುದ್ದಿ ಹೇಳೋದು ಅಂತ ಸುಮ್ಮನಾಗಿ,  ಮಾತು ಬದಲಿಸಿ ಕುಶಲೋಪರಿ ಕೇಳಿ ಕಳಿಸಿದೆ. ಆದರೆ ನನಗೆ ಕಾಡಿದ್ದು ರೇಖಾ ಆಂಟಿ ಹೇಳಿದ ಆ ಮಾತು. ಏನಂದ್ರೆ ಮುಂಚೆ ಮಹೇಶ ಹಿಂಗ ಇರಲಿಲ್ಲ ಆ ಉಡಾಳ ಹುಡುಗರ ಜೋಡಿ ಕೂಡಿ ಹಿಂಗ ಆಗ್ಯಾನ ಅಂತ ಅಂದಿದ್ದು.

                    ಒಬ್ಬ ಹುಡುಗ ಇದ್ದಕ್ಕಿದ್ದ ಹಾಗೆ ಬದಲಾಗೊದನ್ನ, ಕೆಲ ಅಪಾಯಕಾರಿ ವ್ಯಸನಗಳಿಗೆ ದಾಸನಾಗೋದನ್ನ ಆತನ ಸ್ವಯಮ್ಕ್ರುತ ಅಪರಾಧ ಅಂತ ಯಾವ ತಂದೆ ತಾಯಿನೂ ಒಪ್ಪೋದಿಲ್ಲ. ಏ ನಮ್ಮ ಹುಡುಗ ಮೊದಲ ಹಿಂಗ ಇರಲಿಲ್ಲ ರಿ , ಆತನ ಸ್ನೇಹಿತರ ವಲಯ ಸರಿಯಿಲ್ಲ , ಆತ ಬೆಳೀತಿರೋ ಪರಿಸರ ಸರಿಯಿಲ್ಲ ಅದಕ್ಕೆ ಹೀಗಾಗಿದ್ದಾನೆ ಅಂತ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ತಾವು ದೂರ ಸರಿದು ಬಿಡುತ್ತಾರೆ.  ಈ ಮಾತು ಎಸ್ಟರ ಮಟ್ಟಿಗೆ ಸತ್ಯ ? ಒಬ್ಬ ವ್ಯಕ್ತಿ ಏನರೆ ಸಾಧಿಸೋಕೆ ಅಥವಾ ದಾರಿ ತಪ್ಪೋಕೆ ಸುತ್ತಲಿನ ಪರಿಸರ ಮಾತ್ರ ಕಾರಣ ನಾ ? ಆತನ ಸ್ವಂತ ನಿರ್ಧಾರ ಏನೂ ಇರುವುದಿಲ್ಲವಾ ?. ಈ ಚರ್ಚೆ ಮುಂದುವರೆಸೊ ಮೊದಲು ಒಂದು ಸಣ್ಣ ಉದಾಹರಣೆ ಹೇಳುತ್ತೇನೆ ಕೇಳಿ .  ಇದ್ದಕ್ಕಿದ್ದ ಹಾಗೆ  ಯಾರೊ ಬಂದು ನಿಮ್ಮ ಮನೆ ಬಾಗಿಲು ಬಡಿಯುತ್ತಾರೆ , ಎದ್ದು ಹೋಗಿ ಬಾಗಿಲು ತೆರೆದು ನೋಡಿದರೆ ಅಪರಿಚಿತ ವ್ಯಕ್ತಿ . ಆತನನ್ನ ಬಾಗಿಲಲ್ಲೇ ನಿಲ್ಲಿಸಿ ವಿಚಾರಿಸಿ ಕಳಿಸಿ ಬಾಗಿಲು ಹಾಕಿಕೊಂಡರೆ ಮುಗೀತು , ಆತ ವಾಪಸ್ ಹೋಗಿ ಬಿಡುತ್ತಾನೆ , ನೀವು ಆತನನ್ನ ಮನೆಯೊಳಗೆ ಕರೆದರೆ ತಾನೆ ಆತನಿಂದ ಒಳ್ಳೇದು ಅಥವಾ ಕೆಟ್ಟದ್ದು ನಡೆಯೋದು. ಹೀಗೆ ನಮ್ಮ ಜೀವನದ ಮನೆಯ ಬಾಗಿಲಲ್ಲಿ ನಿಂತು ದಿನಾಲೂ ಅದೇಸ್ಟೋ ಒಳ್ಳೆಯ ಮತ್ತು ಕೆಟ್ಟ ಆಯ್ಕೆಗಳು ಬಾಗಿಲು ಬಡಿಯುತ್ತಿರುತ್ತವೆ, ನಾವು ಒಳಗೆ ಕರೆದರೆ ಮಾತ್ರ ಒಳಗೆ ಬರುತ್ತವೆ,  ಇಲ್ಲ ಒಮ್ಮೆ ತಿರಸ್ಕರಿಸಿ ಬಿಟ್ಟರೆ ಮುಗೀತು ಹೊರಗಿಂದ ಹೊರಗೆ ಹೋಗಿ ಬಿಡುತ್ತವೆ.
ಇನ್ನೂ ಸ್ವಲ್ಪ ವಿವರಿಸಿ ಹೇಳೋದಾದ್ರೆ , ಸಿಗರೇಟ್ ಸೇದುವ ನಿಮ್ಮ ಸ್ನೇಹಿತನೊಬ್ಬ ತಾನು ಸೇದುವಾಗ ನೀವು ಜೊತೆಯಿದ್ದರೆ , ಸೇದುವಂತೆ ನಿಮಗೆ ಪ್ರೇರೇಪಿಸಬಹುದೆ ಹೊರತು ಬಲವಂತದಿಂದ ಸಿಗರೇಟ್ ನಿಮ್ಮ ಬಾಯಲ್ಲಿ ಇಟ್ಟು ಕಡ್ಡಿ ಗಿರೋದಿಲ್ಲ. ಕುಡಿತದ ಚಟವಿರುವ ಸ್ನೇಹಿತ ಕುಡಿಯಲು ಸೂಚಿಸಬಹುದೆ ವಿನಃ ಮೂಗು ಹಿಡಿದು ಬಾಯಲ್ಲಿ ಹಾಕುವುದಿಲ್ಲ. ನಾವು ಒಮ್ಮೆ ತಿರಸ್ಕರಿಸಿ ಬಿಟ್ಟರೆ ಮುಗೀತು ಇನ್ನೊಮ್ಮೆ ಅವರು ನಮ್ಮನ್ನ ಕೆಣಕುವುದಿಲ್ಲ. ಈಗ ಹೇಳಿ , ಒಬ್ಬ ಹುಡುಗ ಹಾಳಾಗೊಕೆ ಅಥವಾ ಕೆಟ್ಟ ದಾರಿ ಹಿಡಿಯೋಕೆ , ಸುತ್ತಲಿನ ವಾತಾವರಣ ಎಸ್ಟು ಕಾರಣವೊ ಅವನೂ ಅಸ್ಟೆ ಕಾರಣ ತಾನೆ. ಅದೆಲ್ಲವನ್ನೂ ಬಿಟ್ಟು ಬರಿ ಸುತ್ತಲಿನ ವಾತವರಣವನ್ನ  ಜರಿದರೆ ಏನು ಬಂತು?.
                  ಕೆಲ ಯುವಕರನ್ನು ನೋಡಬೇಕು , ಬೆಳಗ್ಗೆ ಆಗ್ತಿದ್ದಂಗೆ ಬಾಯಲ್ಲಿ ಗುಟಕಾ ಕೈಯಲ್ಲಿ ಸಿಗರೇಟ್ , ರಾತ್ರಿ ಗಂಟಲಲ್ಲಿ ವಿಸ್ಕಿ. ಮಾತು ಎತ್ತಿದರೆ ಅವಳು ಹಾಗೆ ಇವಳು ಹೀಗೆ , ಬರಿ ಇದೆ ಆಯ್ತು . ಕಾರಣ ಕೇಳಿದರೆ ಮೊದಲೆಲ್ಲ ನಾ ಹಿಂಗ ಇರಲಿಲ್ಲ ರಿ, ನಮ್ ಫ್ರೆಂಡ್ ಸರ್ಕಲ್ ಸರಿಯಿಲ್ಲ ಅನ್ನೊ ಸಮಜಾಯಿಷಿ ಬೇರೆ. ಒಂದು ವೇಳೆ ಒಬ್ಬ ಹುಡುಗನ ಕೆಟ್ಟ ಅಥವಾ ಒಳ್ಳೆ ಬೆಳವಣಿಗೆಗೆ ಪರಿಸರ ಮತ್ತು ಸುತ್ತಲಿನವರು ಮಾತ್ರ ಕಾರಣ ಅನ್ನೋದಾದ್ರೆ, ಅದೇಸ್ಟು ವರ್ಷಗಳಿಂದ ಕುವೆಂಪು ಬೇಂದ್ರೆ ಯವರ ಬಗ್ಗೆ ಓದಿದಿವಿ, ನಾವೆಸ್ಟು  ಜನ ಅವರನ್ನ ಆದರ್ಶವಾಗಿಟ್ಟುಕೊಂಡು ಕವಿಗಳು ಆಗಿದಿವಿ ? ರಾಮಕೃಷ್ಣ ಪರಮಹಂಸ ಮತ್ತು ವಿವೇಕರ ಬಗ್ಗೆ ಸಾಕಸ್ಟು ಕಥೆಗಳನ್ನ ಕೇಳಿದಿವಿ, ಎಸ್ಟು ಜನ ಯುವಕರು ವೈರಾಗ್ಯ ತಾಳಿದಿವಿ ? ಅಬ್ದುಲ್ ಕಲಾಮ್ ರವರ ಬಗ್ಗೆ ನಿನ್ನೆ ಮೊನ್ನೆ ವರೆಗೂ ಕೇಳ್ತಾ ಬೆಳದಿವಿ, ಎಸ್ಟು ಪರ್ಸೆಂಟ್ ಜನ ವಿಜ್ನಾನಿ ಆದ್ವಿ ? . ಇದೆಲ್ಲ ಬಿಡಿ ಹಳೆ ಕಥೆ ಅನಬಹುದು , ಇತ್ತೀಚಿನ ಯುವಕರ ರೋಲ್ ಮೊಡೇಲ ಗಳ ಮುಂಚೂಣಿಯಲ್ಲಿ ಇರುವವರೇಂದರೇ  ಚಿಕ್ಕಮಗಳೂರ ಎಸ್ಪಿ ಅಣ್ಣಾಮಲೈ, ಬೆಂಗಳೂರ ಎಸ್ಪಿ ರವಿ ಚಣ್ಣನ್ನವರ, ಕುಡಚಿಯ ಎಂಗ್ MLA ಪಿ ರಾಜೀವ್ , ಮೈಸೂರಿನ ಎಂಗ್ MP ಪ್ರತಾಪ್ ಸಿಂಹ ಮತ್ತು ಯುವ ಬ್ರಿಗೇಡ್ ನ ಚಕ್ರವರ್ತಿ ಸುಲಿಬೆಲೆ . ಅವರ ಬಗ್ಗೆ ದಿನಾ ಪೇಪರ್ ಮತ್ತು tv ನಲ್ಲಿ ನೋಡ್ತೇವೆ, ಅವರನ್ನ ಆದರ್ಶವಾಗಿರಿಸಿಕೋಂಡು ಎಸ್ಟು ಜನ IPS ಪಾಸ್ ಮಾಡಿದಿವಿ ? ಎಸ್ಟ್ ಜನ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದಿವಿ ? ಅಲ್ವಾ .
ನಾ ಹೇಳ್ತೀರೊ ಮಾತಿನ ಅರ್ಥ ಈಸ್ಟ, ನಾವು ಒಳ್ಳೆಯವರಾಗಿ ಅಥವಾ ಕೆಟ್ಟವರಾಗಿಲ್ಲ ಬೆಳಿಯೋಕೇ ಸುತ್ತಲಿನ ಪರಿಸರ ಎಸ್ಟು ಕಾರಣನೊ  ನಾವೂ ಅಸ್ಟೆ ಕಾರಣರು, ಬರಿ ಪರಿಸರವನ್ನ ದೋಷಿಸುವುದರಲ್ಲಿ ಹುರುಳಿಲ್ಲ ಅಂತ.
ಸರಿ ಅನಿಸಿದರೆ ಈ ಲಿಂಕ್ ಇತರ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ , ನಿಮ್ಮ ಸ್ನೇಹಿತರ ಸಿದ್ದು .

Comments

  1. Yes re nivu helodu 100%right navu mado tappanna ennobbar mele hakodu astu sari eralla modlu navu ollevaragidre kettavarannu ollevaranna madabahudu alva

    ReplyDelete

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ