O my Friends
ಈ ಸ್ನೇಹದ ಕುರಿತು ಸುದೀರ್ಘವಾಗಿ ಬರೆಯಲು ಕಾರಣ ಏನು ಅಂದ್ರೆ, ಮೊನ್ನೆ ನನ್ನ ಒಂದು ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ ಮಾಡುವಾಗ ಸ್ನೇಹಿತ ದೇವು ಒಂದು ಕಮೆಂಟ್ ಬರೆದಿದ್ರು. ಅದೇನು ಅಂದ್ರೆ, ಸ್ವಾರಿ ಇತ್ತೀಚಿಗೆ ಸರಿಯಾಗಿ ರೆಸ್ಪಾನ್ಸ್ ಮಾಡೋಕೆ ಆಗ್ತಿಲ್ಲ ಅಂತ. ಮೊದಲೆಲ್ಲ ಗಂಟೆ ಲೆಕ್ಕದಲ್ಲಿ ಮಾತಾಡಿದೀವಿ, ಆದರೆ ಅವರು ಹೇಳಿದ್ ಹಾಗೆ ಇತ್ತೀಚಿಗೆ ಸ್ವಲ್ಪ ಕಡಿಮೆ ಆಗಿದೆ ಕಾಲ್ ಮಾಡೋದು ಮಾತಾಡೋದು ಎಲ್ಲ. ಹಾಗಂತ ಅವರ ಮೇಲೆ ನನಗೆ ಒಂಚೂರೂ ಬೇಜಾರಿಲ್ಲ ಸಿಟ್ಟಿಲ್ಲ. ಕಾರಣ ನನಗೆ ಗೊತ್ತು ಏನಂದ್ರೆ ಅವರೀಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ. ಅವರು ಮನೆಗೆ ಕಾಲ್ ಮಾಡೋದೇ ವಾರಕ್ಕೊಮ್ಮೆ,ಇದೆಲ್ಲ ಗೊತ್ತಿದ್ರೂ ಅವರ ಮೇಲೆ ಸಿಟ್ ಮಾಡ್ಕೊಂಡ್ರೆ ಅದನ್ನ ಸ್ನೇಹ ಅಂತಾರಾ ?. ಹಾಗಾಗಿ ನಾನು ಇಟ್ಸ್ ಓಕೆ ಡಿಯರ್ ಅಂಟ್ ರಿಪ್ಲೆ ಮಾಡದೆ . ಈ ಕುರಿತೇ ಮೊನ್ನೆ ನನ್ನ ವಾಟ್ಸಪ್ಪ್ ಸ್ಟೇಟಸ್ ಕೂಡ ಇಟ್ಟಿದ್ದೆ, ಅದೇನು ಅಂದ್ರೆ " ನಿಮ್ಮ ಆತ್ಮೀಯರಿಂದ ಕಾಲ್ ಬಂದಿಲ್ಲ ಮೆಸೇಜ್ ಬಂದಿಲ್ಲ ಅಂತ ಬೇಜಾರಾಗಬೇಡಿ, ಅಷ್ಟಕ್ಕೂ ಒಂದು ಸ್ನೇಹವನ್ನ ಬರಿ ಒಂದು ಕಾಲ್ ಅಥವಾ ಒಂದು ಮೆಸೇಜ್ ಯಿಂದ್ ಅಳಿಯೋದು ಎಷ್ಟು ಸರಿ?" ಅಂತ. ಅದನ್ನ ತುಂಬಾ ಜನ್ ಮೆಚ್ಕೊಂಡ್ರು. ಇನ್ನೊಬ್ರು ಆತ್ಮೀಯ ಸ್ನೇಹಿತ ಇದ್ದಾರೆ ದಯಾನಂದ ಬಡಿಗೇರ ಅಂತ. ಎಂಟು ವರ್ಷದ ಹಿಂದೆ ಮಾನಸ ಪತ್ರಿಕೆಯಿಂದ ಪರಿಚಯ ಆದವರು. ಆಗಿನ್ನೂ ಅವರು ಪಿಯುಸಿ ಓದುತಿದ್ದರು, ಸದ್ಯ ಅವರು ಬೆಂಗಳೂರಿನಲ್ಲಿ ಪಿಎಸೈ . ಈ ಎಂಟು ವರ್ಷದಲ್ಲಿ ನಾವು ಮುಖಾಮುಖಿಯಾಗಿದ್ದು ಕೇವಲ ಮೂರು ಇಲ್ಲ ನಾಲ್ಕು ಬಾರಿ ಅಷ್ಟೆ, ಯಾವಾಗಲಾದರೂ ಕಾಲ್ ಮಾಡಿದರೆ ಮೂರು ನಿಮಿಷ ಕಿಂತ ಜಾಸ್ತಿ ಮಾತಾಡಿದ ಹಿಸ್ಟರಿ ಇಲ್ಲ. ಆದರೆ ಈವರೆಗೂ ನಮ್ಮ ನಡುವೆ ಪರಸ್ಪರರಲ್ಲಿ ಇರುವ ಗೌರವ್ ಪ್ರೀತಿ ಕಡಿಮೆ ಆಗಿಲ್ಲ. ಹಾಗೆ ಸುತಗುಂಡಿ ಯಲ್ಲಿ ಗೆಳೆಯರ ದೊಡ್ಡ ದಂಡೆ ಇದೆ. ಹೈಸ್ಕೂಲ್ ಎಲ್ಲರು ಒಟ್ಟಿಗೆ ಓದಿದವರು, ಪಿಯುಸಿ ಅಕ್ಕ ಪಕ್ಕದ ರೂಮ್ ನಲ್ಲಿ ಕಳೆದವರು. ಕಾಲೇಜ್ ಮುಗಿದ ಮೇಲೆ ಮೊದಲಿನ ಹಾಗೆ ಟಚ್ ನಲ್ಲಿ ಇರಲು ಆಗಲಿಲ್ಲ, ಆದ್ರೆ ನನ್ನ ಮೊದಲ ಕವನ ಸಂಕಲನ ಬಿಡುಗಡೆ ಸಂದರ್ಭದಲ್ಲಿ, ಕುಂಬಾರ ಸರ್ ರವರ ಮಾರ್ಗದರ್ಶನದಂತೆ ಇಡಿ ಕಾರ್ಯಕ್ರಮವನ್ನ ಹೊತ್ತು ನಿಂತು ಯೆಶಸ್ವಿ ಮಾಡಿದವರು ಇದೆ ಸುತಗುಂಡಿ ಸ್ನೇಹಿತರು. ಅಂತಃ ಸ್ನೇಹಿತರ ಮೇಲೆ , ನೀವು ನನಗೆ ಕಾಲ್ ಮಾಡಲ್ಲ, ಮೆಸೇಜ್ ಮಾಡಲ್ಲ, ಮೊದಲಿನ ಹಾಗೆ ಟಚ್ ನಲ್ಲಿ ಇಲ್ಲ ಅಂತ ಸಿಟ್ ಮಾಡ್ಕೊಳ್ಳೋಕ ಆಗ್ತದಾ ? ಅದನ್ನ ಬುದ್ದಿವಂತಿಕೆ ಅಂತಾರಾ ?. ಇನ್ನೊಂದು ಉದಾಹರಣೆ ಹೇಳೋದಾದರೆ, ಗೋಪಾಲ ಅಣ್ಣ ಅಂತ, ಇತ್ತೀಚಿಗೆ ಎರಡು ವರ್ಷದಿಂದ ಪರಿಚಯ ಆದವರು. ನಾನು ಆಗಾಗ ಅವರಿಗೆ ಗುಡ್ ಮಾರ್ನಿಂಗ್ , ಗುಡ್ ನೈಟ್ ಅಂಟ್ ಮೆಸೇಜ್ ಮಾಡ್ತೀನಿ, ಅವರು ರಿಪ್ಲೆ ಮಾಡಲ್ಲ, ನನಗೆ ಗೊತ್ತು ಅವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ಬೆಳಗ್ಗೆ ಆಫೀಸ್ ಗೆ ಹೋದ್ರೆ ಸಂಜೆ ನೇ ಮನೆಗೆ ವಾಪಾಸ್ ಬರೋದು. ಹಾಗಿದ್ರೂ ಏನಾದ್ರು ಎಮರ್ಜೆನ್ಸಿ ಇದೆ ಅಂತ ಹೇಳದ್ರೆ ನನಗಿಂತ ಮೊದಲು ಅವರೆ ಕಾಲ್ ಮಾಡಿ ವಿಚಾರಿಸ್ತಾರೆ, ತಮ್ಮ ಕೈಲಾದ ಸಹಾಯ ಮಾಡ್ತಾರೆ. ಮೊನ್ನೆ ಊರಿಗೆ ಬಂದಾಗ, ಸಿದ್ದು ನನಗೆ ಕರ್ಪುರಮಠ ಕಾಲೇಜ್ ನಲ್ಲಿ ಪರಿಚಯ ಇದಾರೆ, ಅವರಿಗೆ ಹೇಳ್ತಿನಿ, ಒಮ್ಮೆ ಹೋಗಿ ಮೀಟ್ ಆಗಿ ಬರ್ರಿ, ಮುಂದೆ ಹೆಲ್ಪ್ ಆಗ್ತದೆ ಅಂತ ಮನೆ ಹಿರಿ ಅಣ್ಣನ ಹಾಗೆ ಹೇಳ್ತಿದ್ರೆ ಮಂತ್ರಮುಗ್ಧನಾಗಿ ಕೇಳ್ತಾ ಕೂತು ಬಿಟ್ಟಿದ್ದೆ. ಇಂತಃ ಅಪರೂಪದ ಸ್ನೇಹಗಳನ್ನ ಕೇವಲ ಒಂದು ಕಾಲ್ ಅಥವಾ ಒಂದು ಮೆಸೇಜ್ ಯಿಂದ ಅಳಿಯೋಕ ಆಗ್ತದಾ ಹೇಳಿ?. ಪ್ರತಿಯೊಬ್ಬರಿಗೂ ಅವರದೇ ಆದ ಕೆಲ ಜವಾಬ್ದಾರಿ ಇರ್ತವೆ , ಅವುಗಳ ಮದ್ಗ್ಯೆಯೂ, ಕಷ್ಟ ಅಂತ ಹೇಳಿಕೊಂಡರೆ ಅರ್ಧ ರಾತ್ರಿಲೂ ಎದ್ದು ಬರ್ತಾರೆ , ಸಂತೋಷದ ಸುದ್ದಿ ಹೇಳಿದರೆ ನನಗಿಂತ ಅವರೇ ಹೆಚ್ಚು ಖುಷಿ ಪಡ್ತಾರೆ ನನ್ನ ಸ್ನೇಹಿತರು, ಇನ್ನೇನು ಬೇಕು ಈ ಜನ್ಮಕ್ಕೆ. ಸ್ನೇಹದ ಕುರಿತು ಕೆಲ ಸ್ನೇಹಿತರ ಕುರಿತು ಇನ್ನೂ ಬಹಳ ಹೇಳೋದಿದೆ, ಆದ್ರೆ ಈ ಬ್ಲಾಗ್ ಪೇಜ್ ಲಿಮಿಟ್ ಮುಗೀತಾ ಬಂತು ಅನ್ಸತ್ತೆ. ಕೊನೇದಾಗಿ ಒಂದ್ ಮಾತು ಹೇಳೋದಾದರೆ, "ಸ್ನೇಹ ಅಂದ್ರೆ ಬೈಟು ಫಂಟಾ ಹೊಡೆದು, ಅಗ್ಗದ ಸಿಗರೇಟ್ ಎಳೀತಾ , ಬಲಗಾಲಿಟ್ಟು ಬಂದು ಎಡಗಾಲಿನಿಂದ ಒದ್ದು ಹೋದ ಹುಡುಗಿ ಬಗ್ಗೆ ಮಾತಾಡ್ತಾ ಕೂಡೋದಷ್ಟೆ ಅಲ್ಲ" ಅದರಾಚೆ ತುಂಬಾ ಇದೆ ಜಸ್ಟ್ ಫೀಲ್ ಈಟ್ ..... ನಿಮ್ಮ ಸ್ನೇಹಿತ ಸಿದ್ದು.
Comments
Post a Comment