ನಿರ್ಮಲ ಗೆ ಗಂಡು ಮಗು ಆಗಿತ್ತು .
ನಾನಾಗ ಮಹಾಂತ ಲ್ಯಾಬ್ ನಲ್ಲಿ ಡ್ಯೂಟೀ ಮಾಡ್ತಿದ್ದೆ . ಸಂಜೆ ಐದು ಇಲ್ಲ ಐದುವರೆ ಆಗಿರಬಹುದು , ಅಪ್ಪ ಕಾಲ್ ಮಾಡಿ , ನಿರ್ಮಲ ಗೆ ಸಾಸನೂರ ಬಾಯಿ ದವಾಖಾನಿ ಗಿ ಕರ್ಕೊಂಡ್ ಬಂದಾರಂತ ಹೋಗಿ ಭೆಟ್ಟಿ ಆಗಿ ಬಾ ಅಂದ. ಯಾಕೆ ಏನು ಅಂತ ಅಪ್ಪ ನೂ ಏನೂ ಹೇಳಲಿಲ್ಲ , ನಾನೂ ಏನೂ ಕೇಳಲಿಲ್ಲ , ಕಾಲ್ ಕಟ್ ಆಯ್ತು . ಇಪ್ಪತ್ತು ರೂಪಾಯಿ ದು ಒಂದ್ ಬ್ರೆಡ್ ಪಾಕೆಟ್ ತಗೊಂಡು ನನ್ನ ಅಟ್ಲಾಸ್ ಸೈಕಲ್ ಹ್ಯಾಂಡಲ್ ಗೆ ಸಿಕ್ಕಿಸಿ , ಪೈಡಲ ತುಳಿದೆ . ತುಂಬ ಸ್ಪೀಡ್ ಆಗೆ ಓಡ್ತಿತ್ತು ಸೈಕಲ್ ಸಾಸನೂರ ಹಾಸ್ಪಿಟಲ್ ಕಡೆ. ನನಗಿಂತಲೂ ಹೆಚ್ಚಿನ ದುಗುಡ ಧಾವಂತ ಸೈಕಲ್ ಗೆ ಇತ್ತೇನೊ . ಒಮ್ಮೆಲೆ ನಾನಷ್ಟ ಗಾಬರಿಯಾಗಲೂ ಒಂದು ಕಾರಣ ಇತ್ತು . ನಿರ್ಮಲ ಬೇರೆ ಯಾರೂ ಅಲ್ಲ ನನ್ನ ಸ್ವಂತ ಸೋದರ ಮಾವನ ಮಗಳು. ಬರಿ ಮಾವನ ಮಗಳಾಗಿದ್ರೇ ಇಷ್ಟೊಂದ್ ಆತಂಕಪಡುವ ಆವಶ್ಯಕತೆ ಇರ್ತಿರಲಿಲ್ಲ ನನಗೆ , ಆದ್ರೆ ಈಗೆ ಎರಡು ವರ್ಷಗಳ ಹಿಂದೆ ನನ್ನ ಜೊತೆ ಮದುವೆ ಪಿಕ್ಸ ಆಗಿದ್ದ ಹುಡುಗಿ, ಸೊ ಏನಾಯ್ತು ಯಾಕೆ ಅಂತ ಗಾಬರಿ ಸಹಜ ಅಲ್ವಾ ?
ಅವತ್ತು ಸಂಜೆ ಎಲ್ರೂ ಒಟ್ಟಿಗೆ ಕೂತು ಊಟ ಮಾಡ್ತಿದ್ವಿ . ಅವ್ವ ಕೇಳದಳು, ನಿರ್ಮಲ ಬಗ್ಗೆ ನಿನ್ನ ಅಭಿಪ್ರಾಯ ಏನು ಅಂತ . ಸಡನ್ ಆಗಿ ನನಗೆ ಗೊತ್ತಾಗಲಿಲ್ಲ . ಯಾಕಮ್ಮ ಏನಾಯ್ತು ಅಂದೆ . ಅದೆ ನೀನ್ ಮದುವೆ ವಿಚಾರ . ನೀನ್ ಹೂಂ ಅಂದ್ರೆ , ಅಣ್ಣನ ಜೊತೆ ಮಾತಾಡ್ತಿನಿ ಅಂದ್ಲು ಅವ್ವ . ನಾನು ಆಗಾಗ ಜಾತ್ರೆ ನಿಮಿತ್ತ ಅವ್ವನ ಜೊತೆ ನಿರ್ಮಲ ಅವರ ಊರಿಗೆ ಹೋಗ್ತಿದ್ದೆ . ಹಲವಾರು ಬಾರಿ ನೋಡಿದ್ದೆ ಅವಳಿಗೆ . ನನಗಿಂತ ಸ್ವಲ್ಪ ಹೈಟ್ ಕಮ್ಮಿ ಬಟ್ ಕಲರ್ ನನಗಿಂತ ಜಾಸ್ತಿ . ಇನ್ನೊಂದ್ ಅವಳ ಪ್ಲಸ್ ಪಾಯಂಟ್ ಅಂದ್ರೆ ಸಕತ್ತಾಗಿ ಎಲ್ಲ ಥರದ ಅಡುಗೆ ಮಾಡ್ತಿದ್ಲು . ಇನ್ನೂ ಶಿಕ್ಷಣ ದ ವಿಷಯಕ್ಕೆ ಬರೋದಾದ್ರೆ , ಪರವಾಗಿಲ್ಲ ಈ ಸರ್ತಿ ಪಿಯುಸಿ . ಒಲ್ಲೆ ಅನ್ನೋಕೆ ಏನೂ ರೀಜನ್ ಸೀಗಲೇಯೀಲ್ಲ ನನಗೆ, ಹೂಂ ಆಯ್ತು ಅಂದೆ . ಆಗ ನಮ್ ಅವ್ವನ ಮುಖ ನೊಡಬೇಕಿತ್ತು ಇಷ್ಟಗಲ ಅರಳಿತ್ತು , ಅಣ್ಣ ನ ಮಗಳು ಸೊಸೆಯಾಗಿ ಬರ್ತೀದಾಳೆ ಅಂತ.
ಇದಾದ ಮೇಲೆ ಇಬ್ಬರ ಮನೆಯವರ ನಡುವೆ ಒಂದು ಸಣ್ಣ ಮಾತು ಕಥೆ ಮುಗೀತು, ಎರಡೂ ಮನೆಯಲ್ಲಿ ಖುಷಿ .
ನಾನು ಅದೆ DMLT ಮುಗಿಸಿ ಡ್ಯೂಟೀ ಜಾಯ್ನ ಆಗಿದ್ದೆ , ನಿರ್ಮಲ ಪಿಯುಸಿ ಕಾಲೇಜ್ ಹೋಗ್ತೀದ್ಲು . ಇಬ್ಬರ ಮನೆಯಲ್ಲೂ ಮದುವೆ ಗೆ ಒಪ್ಪಿಯಾಗಿದೆ, ಅತೀ ಹತ್ತಿರದ ಸಂಭಂದ , ಇಬ್ಬರೂ ಚಿಕ್ಕಂದಿನಿಂದ ನೋಡ್ಕೊಂಡ್ ಬೆಳೆದವರೆ. ಮುಚ್ಚು ಮರೆ , ನಾಚಿಕೆ ಅಂಥಂದ್ದು ಏನೂ ಇರಲಿಲ್ಲ ನನ್ನ ಮತ್ತು ನಿರ್ಮಲ ಮಧ್ಯ . ಸೊ ದಿನ ಮಾತಾಡಬೇಕು , ಕುಶಲೋಪರಿ ಕೇಳಬೇಕು ಅಂತ ಆಶೆ ಅವಳಿಗೆ , ಆದ್ರೆ ನನ್ ಹತ್ರ ಮೊಬೈಲ್ ಇತ್ತು ಅವಳ ಹತ್ರ ಇರಲಿಲ್ಲ . ಆದ್ರೂ ಮದುವೆ ಮಾತುಕತೆ ಮುಗಿದ ಮಾರನೆ ದಿನದಿಂದ, ದಿನಾ ಮಧ್ಯಾಹ್ನ ಕಾಲೇಜ್ ಮುಗಿಸಿ ಮನೆಗೆ ಹೋಗುವಾಗ ಕ್ವಾಇನ ಬಾಕ್ಸ್ ಯಿಂದ ಫೋನ್ ಮಾಡ್ತಿದ್ಲು. ಹೇಗಿದೀರಾ ? ಎನ್ ಮಾಡ್ತಿದೀರಾ ಅನ್ನೊ ಬದಲು , ಫಸ್ಟ್ ಗೆ ಊಟಾ ಆಯ್ತರಿ ಅನ್ನೋಳು. ನನ್ ಊಟದ ಬಗ್ಗೆ ತುಂಬ ಚಿಂತೆ ಆಕೆಗೆ , ಮೆಸ್ಸ್ ಊಟಾ ಸರಿ ಹೋಗಲ್ಲ ಅಂತ. ನಾನ್ ಕೆಲವೊಮ್ಮೆ ಕಿಂಡಲ್ ಮಾಡ್ತಿದ್ದೆ , ಊಟ ಆಯ್ತೇನ ಅಂತ ಬರಿ ನೀ ಫೋನ್ ದಾಗ ಕಾಳಜಿ ಮಾಡಾಕಿ , ಮಾಡಿಲ್ಲ ಅಂದ್ರ ಬಂದ್ ಅಡುಗೆ ಮಾಡಿ ಕೋಡಂಗ ಅದಿ ಎನ್ ಅಂತಿದ್ದೆ . ನಮ್ ಅಪ್ಪಗ ಹೇಳ್ರಿ ನಾಳಿಗೆ ಬರ್ತೀನಿ ಅನ್ನಾಕೀ . ಆಕಿ ಜೊತೆ ಮಾತಾಡ್ತಿದ್ರೆ ಚಿಕ್ಕ ಮಕ್ಕಳ ಜೊತೆ ಮಾತಾಡಿದ ಫೀಲ್ ಆಗ್ತಿತ್ತು , ಪ್ರತಿ ಮಾತು ಆಕೆ ಅಂತರಾಳದಿಂದ ಬರ್ತಿತ್ತು , ಒಂಚೂರೂ ಕಪಟ ಇರಲಿಲ್ಲ . ಸೊ ಆಕೆ ಜೊತೆ ಮಾತಾಡೋದೇ ಒಂದ್ ಹಿತವಾದ ಅನುಭವ . ಅವಳ ಕಾಲ್ ಬಂದ ತಕ್ಷಣ ಒಂದೆ ರಿಂಗ್ ಗೆ ರಿಸೀವ್ ಮಾಡ್ತಿದ್ದೆ , ಮಿಸ್ಸ್ ಆದ್ರೆ ಮತ್ತೆ ನಾಳೆ ಕಾಲೇಜ್ ಮುಗೀವರೇಗೂ ಕಾಯಬೇಕಿತ್ತು. ಒಂದೆ ಮಾತಲ್ಲಿ ಹೇಳಬೇಕಾದರೆ, ಇವರು ಲವ್ ಮ್ಯಾರೇಜ್ ಆಗ್ತೀದಾರಾ? ಅರೇಂಜ್ ಮ್ಯಾರೇಜ್ ಆಗ್ತೀದಾರಾ ಅಂತ ನೋಡದವರು ಕನ್ಫೂಜ ಆಗಬೇಕು. ಹಂಗಿತ್ತು ನಮ್ ಬಾಂಧವ್ಯ . ಹೀಗೆ ಹೇಳ್ತಾ ಹೋದ್ರೆ ಪುಟಗಳು ಸಾಲಲ್ಲ.
ಇಂತಹ ನಿರ್ಮಲ ಗೆ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿದಾರೆ ಅಂದ್ರೆ ಆತಂಕ ಅಗತ್ತೆ ಅಲ್ವಾ . ತುಂಬ ಗಾಬರಿಯಿಂದ ಹಾಸ್ಪಿಟಲ್ ತಲುಪಿದೆ.
ಹಾಸ್ಪಿಟಲ್ ಗೇಟ್ ಹತ್ರ ನೆ ನಮ್ ಮಾವ ನಿಂತಿದ್ರು. ಗಾಬರಿಯಿಂದ ನಾನು , ಮಾಮಾ ಏನಾಯ್ತು ನಿರ್ಮಲ ಗೆ ಅಂತ ಕೇಳದೆ. ಡೆಲಿವರಿ ಗೆ ಕರ್ಕೊಂಡ್ ಬಂದಿದ್ವಿ , ಗಂಡು ಮಗು ಆಯ್ತು. ತಾಯಿ ಮಗು ಇಬ್ರೂ ಆರಾಮ ಇದಾರೆ , ಮೇಲ್ಗಡೆ ಹೋಗಿ ಭೇಟಿ ಆಗಿ ಬಾ ಅಂತ ವಾರ್ಡ್ ನಂಬರ್ ಹೇಳದರು.
ಆಗ ಖುಷಿಯಿಂದ ಅಬ್ಬ ಅಂತ ಒಂದ್ ನಿಟ್ಟುಸಿರು ಬಿಟ್ಟೆ . ಮಾತಲ್ಲಿ ನಗು, ಮುಖದಲ್ಲಿ ಹರ್ಷ, ಸೈಕಲ್ ಗೆ ಸಿಕ್ಕಿಸಿದ ಬ್ರೆಡ್ ತಗೊಂಡು ವಾರ್ಡ್ ಕಡೆ ಹೊರಟೆ.
sorry ನಿಮಗೆ ಕನ್ಫೂಜ ಆಗ್ತೀರಬೇಕಲ್ಲ ? ಇನ್ನೂ ಇಬ್ಬರಿಗೂ ಮದುವೆ ನೆ ಆಗಿಲ್ಲ, ಮಗು ಹೇಗಾಯ್ತು ಅಂತ. ವೇಟ್ ಹೇಳ್ತೀನಿ .
ದಿನಾಲೂ ಆಕೆ ಕಾಲೇಜ್ ಮುಗಿದ ಮೇಲೆ ಫೋನ್ ಮಾಡೋದು , ನಾನ್ ಮಿಸ್ಸ್ ಮಾಡದೆ ರಿಸೀವ್ ಮಾಡಿ ಮಾತಾಡೋದು . ಅವರ ಊರಲ್ಲಿ ಜಾತ್ರೆ ಇದ್ದಾಗ ನಾನ್ ಅವರ ಊರಿಗೆ ಹೋಗೋದು, ಫೋನ್ ನಲ್ಲಿ ಗಂಟೆ ಲೆಕ್ಕದಲ್ಲಿ ಮಾತಾಡದರೂ ನಾನ್ ಅವರ ಮನೆಗೆ ಹೊದಾಗ , ನಾಚಿ ಆಕೆ ಮನೇಲೇ ಕುಡೋದು . ಅಮೇಲೆ ಫೋನ್ ಮಾಡ್ದಾಗ , sorry ರಿ ಭಯ ಅನಿಸ್ತು ಅದಕ್ಕೆ ಅಂತ ಅವಳು sorry ಕೇಳೋದು. ಮಧುರ ಮಧುರವಿ ಮಂಜುಳ ಗಾನ ಅನ್ನೊ ಥರ ಎಲ್ಲ ಚೆನ್ನಾಗೇ ನಡೆದಿತ್ತು. ಆದ್ರೆ ದೇವರಿಗೆ ಅದು ಸರಿ ಬರಲಿಲ್ಲ ಅನ್ಸತ್ತೆ . ಅದು ಹೇಗೆ ಅಂದ್ರೆ ಒಂದ್ ಸಿನಿಮಾ ನೋಡ್ತಿರ್ತೀವಿ . ಆ ಕಥೆ ಎಲ್ಲ ಸರಾಗವಾಗಿ ನಡೆದರೆ ನೋಡೋಕೆ ಇಂಟರೆಸ್ಟ್ ಬರುತ್ತಾ ? ಇಲ್ಲ ತಾನೆ ಅದಕ್ಕೆ ಡೈರೆಕ್ಟರ್ ಒಂದಿಷ್ಟು ಟ್ವಿಸ್ಟ್ ಇಟ್ಟಿರ್ತಾರೆ ಕಥೆಯಲ್ಲಿ. ಹೀಗೆ ನನ್ ಕಥೆನೂ ಬೋರ್ ಅನಿಸೀತೋ ಏನೊ ದೇವರೆಂಬ ನಮ್ಮ ಬದುಕಿನ ಡೈರೆಕ್ಟರ್ ಗೆ, ಹಾಗಾಗಿ ಒಂದು ದೊಡ್ದು ಟ್ವಿಸ್ಟ್ ತಂದಿಟ್ಟ ನನ್ ಲೈಫ ಎಂಬ ಸಿನಿಮಾದಲ್ಲಿ .
ಅದೇನು ಅಂದ್ರೆ , ಅದೊಂದ್ ದಿನ ಎದೆ ನೋವು ಅಂತ ಹಾಸ್ಪಿಟಲ್ ಗೆ ಅಡ್ಮಿಟ್ ಆದೆ . ECG , X ray , ಕೆಲ blood test ಎಲ್ಲ ಮಾಡಿಸಿದ ಡಾಕ್ಟರ್ ಸ್ವಲ್ಪ ಹಾರ್ಟ್ ಪ್ರಾಬ್ಲಮ್ ಇದೆ ಅಂದ್ರು. ಕಣ್ಣಲ್ಲಿ ನೀರು ತಂದ ಅಪ್ಪ , ಡಾಕ್ಟರ್ ಸರ್ ಮತ್ತ ಮದುವಿ ಫಿಕ್ಸ್ ಆಗೆತೀ ರಿ , ಈ ವರ್ಷ ಮದುವಿ ಮಾಡಬೇಕಂತ ಮಾಡಿವಿ ರಿ ಹೆಂಗ ರಿ ? ಅಂದ .
ಸ್ವಲ್ಪ ದಿನ ಮದುವೆ ವಿಚಾರ ಬೇಡ , ಆಮೇಲೆ ನೋಡೋಣ & ಕಂಡೀಶನ್ ಸ್ವಲ್ಪ ಕ್ರಿಟಿಕಲ್ ಇದೆ ಅಂದ್ರು ಡಾಕ್ಟರ್. ಡಾಕ್ಟರ್ ಮಾತ್ ಕೇಳಿ , ನಾನ್ ಅಳ್ತೀನಿ ಅಪ್ಪ ನನ್ನ ಸಮಧಾನ ಮಾಡ್ತಾರೆ ಅನ್ಕೊಂಡೆ . ಆದ್ರೆ ಸೀನ್ ಪೂರ್ತಿ ಉಲ್ಟಾ , ಹೆಂಗರುಳಿನ ಅಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದ , ಏನಾಗಲ್ಲ ಬಾ ಅಪ್ಪ ಅಂತ ನಾನ್ ಸಮಧಾನ ಮಾಡಿ ನಮ್ ಅಪ್ಪನ್ನ ಮನೆಗ್ ಕರ್ಕೊಂಡ್ ಬಂದಿದ್ದೆ.
ಮುಂದಿನದೆಲ್ಲಾ ನಿಮ್ಮ ಊಹೆಗೆ ನೀಲುಕೀದ್ದೇ ಆಯ್ತು. ನನ್ ಜೊತೆ ಮದುವೆ ಕ್ಯಾನ್ಸಲ್ ಆಗಿ , ಬೇರೆಯವರ ಜೊತೆ ಸಪ್ತಪದಿ ತುಳಿದಳು ನಿರ್ಮಲ. ನಿಮ್ ಕನ್ಫೂಜ ಗೆ ಉತ್ತರ ಸಿಕ್ತಲ್ಲ , ಇನ್ನೂ ಹೆಚ್ಚಿಗೆ ಎನ್ ಹೇಳಲಿ ನಾನು ? ಆಗ್ತಿಲ್ಲ .
ವಾರ್ಡ್ ಗೆ ಹೋದೆ , ಬೇಡ ಮೇಲೆ ಮಲ್ಕೊಂಡಿದ್ದಳು ನಿರ್ಮಲ. ಆಗಲೇ ಹೇಳಿದ್ದೆ ಅಲ್ವಾ , ಅಕೆಗೆ ನನಗಿಂತ ಕಲರ್ ಜಾಸ್ತಿ ಅಂತ . ಈಗ ಹಸಿ ಬಾಣಂತಿ ಬೇರೆ , ಮತ್ತಷ್ಟು ಕಲರ್ ತುಂಬಿ ಗೊಂಬೆ ಥರ ಕಾಣ್ತೀದ್ದಳು. ಪಕ್ಕದಲಿ ಅವಳಷ್ಟೇ ಮುದ್ದಾದ ಮಗು. ನೋಡಿ ತುಂಬ ಖುಷಿ ಆಯ್ತು . ಹೋಗಿ ಪಕ್ಕ ಕೂತು ಹೇಗಿದೀಯ ? ಅಂದೆ. ಸಾಂಕೇತಿಕ ಸಗುವಿನೋಂದಿಗೆ ಹೂಂ ಆರಾಮ ಎಂಬಂತೆ ತಲೆ ಅಲ್ಲಾಡಿಸಿದಳು ಅಷ್ಟೇ , ಅವಳ ಬಾಯಿಂದ ಮಾತೆ ಬರಲಿಲ್ಲ. ಒಂದ್ ಐದ್ ನಿಮಿಷ ಕೂತು ನಮ್ ಅತ್ತೆ ಜೊತೆ ಮಾತಾಡದೇ . ಜಾಸ್ತಿ ಹೊತ್ತು ಹೇಗ್ ಕೂಡಲಿ ಅಲ್ಲಿ , ಫೀಮೇಲ್ ವಾರ್ಡ್ ಸ್ವಲ್ಪ ಮುಜುಗರ ಅನಿಸ್ತು . ಸರಿ ನಾನ್ ಹೋಗ್ ಬರ್ತೀನಿ ಅಂತ ಎದ್ದು ನಿಂತು , ಕೂಸಿನ ಕೈಗೆ ನೂರ್ ರೂಪಾಯಿ ಕೊಟ್ಟು ಹೊರಟು ನಿಂತೆ . ಅವಳಲ್ಲೂ ಮಾತಿಲ್ಲ , ನನಗೂ ಮಾತ್ ಬರ್ತಿಲ್ಲ , ಹಸಿಗೂಸೂ ಅಳ್ತೀತ್ತು , ನೂರ್ ರೂಪಾಯಿ ನೋಟ್ ಮೇಲಿನ ಗಾಂಧಿ ತಾತ ಮಾತ್ರ ನಗ್ತಿದ್ದ.
ಸಿದ್ದು . ತಾಂಬೆ .
Comments
Post a Comment