ಸಿಂಪತಿಯ ಸ್ನೇಹ ಬೇಡ

ಮೊನ್ನೆ ಅಷ್ಟೆ ಎಲ್ಲರೂ ಸ್ನೇಹಿತರ ದಿನಾಚರಣೆ ಆಚರಿಸಿದಿರ. ಹತ್ರ ಇರೊರನ್ನ ಮೀಟ್ ಆಗಿ , ದೂರ ಇರೋರನ್ನ ದೂರವಾಣಿ ಅಥವ ಸಂದೇಶ ಮೂಲಕ ಶುಭಕೋರಿ ಆನಂದಿಸಿದಿರಿ. ನಿಮ್ಮ ಸ್ನೇಹ ಹೀಗೆ ಚಿರವಾಗಿರಲಿ ಎನ್ನುತ್ತ  ಸ್ನೇಹದ ಕುರಿತಾಗಿ ಒಂದೆರಡು ಮಾತಾಡಬೇಕೆನಿಸಿತು,  ಕೆಲ ವಿಷಯ ನಿಮ್ಮೊಂದಿಗೆ ಹಂಚಿಕೊಬೇಕೆನಿಸಿತು ಸೊ ಬೆಳೆಗ್ಗೆ ನೆ ಲ್ಯಾಪ್ ಟಾಪ್ ಆನ್ ಮಾಡ್ಕೊಂಡು ಕೂತ್ ಬಿಟ್ಟಿದಿನಿ.
ಓಕೆ, ವಿಷಕ್ ಬರ್ತಿನಿ.
ಸ್ನೇಹ ಅಂದ್ರೆ, ಭೂಮಿ ಆಕಾಶ್ , ಚುಕ್ಕಿ ಚಂದ್ರಮ, ಉಸರು ಪಸರು ಅನ್ನೊದಕ್ಕಿಂತ ಒಂಚುರು ಪ್ರ್ಯಾಕ್ಟಿಕಲ್ ಆಗಿ ನೋಡದ್ರೆ. ನಮಗೆ ಜೀವನದ ಅನೇಕ ಸಮಯ ಸಂದರ್ಭಗಳಲ್ಲಿ ಹೊಸ ಹೊಸ ಸ್ನೇಹಿತರು ಪರಿಚಯ ಆಗ್ತಾರೆ. ಮೊದಲನೆಯದಾಗಿ , ನಾವು ಚಿಕ್ಕವರಿದ್ದಾಗ ನಮ್ಮ ಮನೆ ಅಕ್ಕ ಪಕ್ಕದ ಓರಿಗೆ ಯವರು. ನಂತರ ಸ್ಕೂಲ್ ನಲ್ಲಿ ಒಂದಿಷ್ಟ್ ಜನರ ಸ್ನೇಹವಾಗ್ತದೆ. ಸ್ಕೂಲ್ ನಂತರ ಹೈಸ್ಕೂಲ್, ನಂತರ್ ಕಾಲೇಜ್, ಕೊನೆಗೆ ಕೆಲಸಕ್ಕೆ ಸೆರಿಕೊಂಡ ಆಫಿಸ್ ನಲ್ಲಿಯೂ ಕೆಲ ಜನರ ಸ್ನೇಹವಾಗ್ತದೆ. ಅಷ್ಟೆ ಯಾಕೆ  ಕಾಫಿ ಡೆ ಯಲ್ಲಿ, ಕ್ರಿಕೇಟ್ ಗ್ರೌಂಡ್ ಲ್ಲಿ, ಮಾರ್ಕೇಟ್ ಲ್ಲಿ, ಸಿನಿಮಾ ಹಾಲ್ ನಲ್ಲಿ, ಇಲ್ಲ ಯಾರದೊ ಮದುವೆ ಮುಂಜಿಯಂಥಹ ಕಾರ್ಯಕ್ರಮಗಳಿಗೆ ಹೋದಲ್ಲಿ. ಹೊಸ ಹೊಸ ಜನ ಪರಿಚಯ ಆಗ್ತಾರೆ, ಸಮಾನ ಮನಸ್ಕರಾದಲ್ಲಿ ಆ ಸ್ನೇಹ ಮುಂದಿವರೆಯಿತ್ತದೆ. ನಮ್ಮ ನೋವು ನಗುವಿನಂತಹ ಅನೇಕ ಭಾವನೆಗಳಿಗೆ ಸ್ಪಂದಿಸ್ತಾರೆ, ನಮ್ಮ ಕಷ್ಟ ಸುಖಕ್ಕ ಆಗ್ತಾರೆ. ಪ್ರತಿ ದಿನ ಮೀಟ್ ಆಗಿ ಮಾತಾಡೋಕ್ ಆಗದೆಯಿದ್ರೂ, ಕಾಲ್ ಮೆಸೆಜ್ ಮೂಲಕ್ ವಾದ್ರೂ ನಮ್ಮ ಜೊತೆ ಟಚ್ ನಲ್ಲಿ ಇರ್ತಾರೆ. ಇದು ಸ್ನೇಹ ಮತ್ತು ಕೆಲವರು ನಮ್ಮ ಸ್ನೇಹಿತರಾಗುವ ಸಮಯ ಸಂದರ್ಭಗಳು.
ಇವುಗಳಲ್ಲಿಯೆ ಇನ್ನೊಂದು ತರದ ಸ್ನೇಹ ಬರ್ತದೆ, ಅದೆ ಸಿಂಪತಿಯ ಸ್ನೇಹ.
ಕೆಲವೊಬ್ಬರಿಗೆ ಒಂದು ಚಟ ಇರ್ತದೆ . ಯಾರಾದರೂ ಹೊಸ ಸ್ನೇಹಿತರಾದ ತಕ್ಷಣ ತಮ್ಮ ಕಷ್ಟ ಹೇಳ್ಕೋಳ್ಳೋದು , ಅವರ ಕಡೆ ಅಯ್ಯೊ ಪಾಪ ಅಂತ ಸಿಂಪತಿ ಗಿಟ್ಟಿಸಿಕೊಳ್ಳೋದು . ಹೀಗೆ ಮಾಡಿದರೆ ಅವರು ನಮ್ ಬಗ್ಗೆ ಅಯ್ಯೊ ಪಾಪ ಅಂತಾರೆ , ನಮ್ಮನ್ನ ಕಾಳಜಿ ಮಾಡ್ತರೆ ನಮ್ಮ  ಸ್ನೇಹ ಚಿರವಾಗಿರ್ತದೆ ಅನ್ನೊ ಕಲ್ಪನೆ ಅವರಿಗೆ. ಓಕೆ ನಿಮ್ಮ ಕಲ್ಪನೆ ತಪ್ಪಲ್ಲ. ಸರಿ ನಿಮ್ಮ ಊಹೆಯಂತೆ, ಅವರ ಮುಂದೆ ನೀವು ನಿಮ್ಮ ಕಷ್ಟ ಹೇಳಿದಾಗ ನಿಮ್ಮನ್ನ ಕೇರ್ ಮಾಡ್ತಾರೆ ಕಾಳಜಿ ಮಾಡ್ತಾರೆ. ಆದ್ರೆ  ಅದು ತುಂಬ ದಿನ ಉಳಿಯಲ್ಲ . ಹೇಗೆ ಅಂತೀರಾ ?. ಕೇಳಿ , ರಸ್ತೆ ಪಕ್ಕ ಒಬ್ಬ ಕುರುಡ ರಸ್ತೆ ದಾಟೋಕ ಆಗದೆ ಕಷ್ಟ ಪಡ್ತಿರ್ತನೆ , ಅದು ನೋಡಿ ನಿಮಗೆ ಅಯ್ಯೊ ಅನಿಸುತ್ತೆ ಆತನ ಮೇಲೆ ಕರುಣೆ ಬರುತ್ತೆ,  ಅದೆ ಸಿಂಪತಿ. ಅದು ಎಲ್ಲಿ ವರೆಗೆ ? ಆತನಿಗೆ ಕೈ ಹಿಡಿದು ರಸ್ತೆ ದಾಟಿಸುವವರೆಗೆ ಅಷ್ಟೇ ಆಮೇಲೆ ಅವನ ದಾರಿ ಅವನಿಗೆ ನಿಮ್ಮ ದಾರಿ ನಿಮಗೆ . 
ಇದೆ ತೆರನಾಗಿ ಒಬ್ಬರ ಹತ್ರ  ನಿಮ್ಮ ಕಷ್ಟ ಹೇಳ್ಕೊಂಡು ಸ್ನೇಹ ಮಾಡ್ಕೊತೀನಿ ಅಂದ್ರೆ ಅದು ಎಷ್ಟ್ ದಿನ ? ನಿಮ್ ಕಷ್ಟ ತಿರೋ ವರೆಗೆ ಅಷ್ಟೇ ಅಮೇಲೆ ನಿಮ್ಮ ದಾರಿ ನಿಮಗೆ,  ಅವರ ದಾರಿ ಅವರಿಗೆ . ನಿಮ್ಮಿಂದ ದೂರ ಆಗಿ ಹೋಗ್ತಾರೆ ಅಂದ್ರೆ ನಿಮ್ಮ ಮೇಲೆ ಸಿಟ್ಟಿರಲ್ಲ ಅದೆ ಥರ ಸ್ನೇಹ ಕೂಡ ಇರಲ್ಲ.  ಅಂದ್ರೆ ಕಣ್ಣ್ ಕಾಣಲ್ಲ ಅಂತ ನನ್ ಹತ್ರ ಬಂದ , ಕೈ ಹಿಡಿದು ರಸ್ತೆ ದಾಟಿಸಿದೆ , ಮುಂದಕ್ಕೆ ಅವನು ಹೋಗ್ತಾನೆ , ನನ್ ಕರ್ತವ್ಯ ಮುಗೀತು ಅಂತ ಅವರ ಪಾಡಿಗೆ ಅವರು ಇದ್ದು ಬಿಡ್ತಾರೆ. ಇಲ್ಲಿಗೆ ಸಿಂಪತಿಯ ಸ್ನೇಹ ಸದ್ದಿಲ್ಲದೆ ಸತ್ತಿರ್ತದೆ . 
ಇದೇನಪ್ಪ ವಿಚಿತ್ರ , ನಮ್ಮೋರು ತಮ್ಮೋರು , ಬಂಧು ಬಳಗ , ಸ್ನೇಹಿತರು ಇರೋದೇ ಕಷ್ಟ ಸುಖ ಹಂಚಕೊಳ್ಳೊಕೆ , ಇವನು ನೋಡದ್ರೆ ಹಿಂಗ್ ಹೇಳ್ತಿದಾನೆ ಅನ್ಕೋಬೇಡಿ . ನಿಜಾ ನಿಮ್ ಮಾತು .  ನಿಮ್ಮ ಕಷ್ಟ ಸುಖವನ್ನ ನಿಮ್ಮ ನಂಬಿಕಸ್ಥ ಕಿವಿಗಳ ಎದುರು ಹೇಳಿ ಹಗುರಾಗಿ, ತಪ್ಪಲ್ಲ.  ಆದ್ರೆ ಅದೆ ಒಬ್ಬರನ್ನ ಸೆಳೆಯುವ ತಂತ್ರ ಆಗಬಾರದು ಅಷ್ಟೇ, ಅಂತಹ ಸ್ನೇಹ ತುಂಬ ದಿನ ಉಳಿಯಲ್ಲ.  ನೀವು ಗಂಡು ಹೆಣ್ಣು , ಬಡವ ಶ್ರೀಮಂತ , ದಡ್ಡ ಬುದ್ದಿವಂತ , ಸ್ವರೂಪಿ ಕುರೂಪಿ ,  ಇವೆಲ್ಲವುಗಳ ಆಚೆ ನಿಮ್ಮದೇ ಆದ ಒಂದು ವ್ಯಕ್ತಿತ್ವ ನಿಮಗಿರುತ್ತದೆ. ಆ ನಿಮ್ಮ ವ್ಯಕ್ತಿತ್ವ ಮುಂದೆ ಇಟ್ಕೊಂಡ್  ಸ್ನೇಹ ಮಾಡಿ, ಅಂತಹ ಸ್ನೇಹ ಯಾವತ್ತೂ ಸಾಯಲ್ಲ . 
ಇದನ್ನ ಓದಿದ ಮೇಲೆ ನಿಮಗೆ,  ಹೌದಲ್ಲ ? ಅನೇಕ ಬಾರಿ ಹೀಗ ಆಗಿದೆ ಅಂತ ಒಂದಾದರೂ ಉದಾಹರಣೆ ನಿಮ್ಮ ಕಣ್ಣ ಎದುರಿಗೆ ಬಂದೆ  ಬರುತ್ತದೆ . ನಿಮ್ಮ ವಿಷಯದಲ್ಲೇ ಕೆಲವರು ಹಾಗೆ ನಡ್ಕೊಂಡಿರತಾರೆ , ಇಲ್ಲ ಬೇರೆಯವರ ವಿಷಯದಲ್ಲಿ ನೀವು ಹಾಗೆ ನಡ್ಕೊಂಡಿರತೀರಿ. ತಪ್ಪು ನಿಮ್ಮದೂ ಅಲ್ಲ , ಅವರದೂ ಅಲ್ಲ , ಅಂತಹ ಸ್ನೇಹಗಳ ಆಯಸ್ಸೇ ಅಷ್ಟು . ಡೋಂಟ ವರಿ , ಇನ್ ಮುಂದೆ ಆದ್ರೂ ಶತಾಯುಷಿ ಸ್ನೇಹವನ್ನ ಸಂಪಾದಿಸೋನಣ.   
ಸಿರಿ ಸ್ನೇಹವO ಗೆಲ್ಗೆ , ನಮಸ್ಕಾರ . 

ಸಿದ್ದು . ತಾಂಬೆ . 




Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ