ಬಿ ಹ್ಯಾಪಿ

ಬೈಕ್ ನಂಬರ ಪ್ಲೇಟ್ ಮೇಲೆ ಬರೆದಂತ ಚುಟುಕು ಸಾಲುಗಳನ್ನ, ಆಟೊ ಹಿಂದೆ ಬರೆದ ಭಗ್ನಪ್ರೇಮ ನಿವೇದನೆಗಳನ್ನ,  ಸಿಟಿ ಬಸ್ ನಲ್ಲಿ ಬರೆದ ಗಾದೆ ಮಾತುಗಳನ್ನ,  ಅಚ್ಚರಿಯಿಂದ ನೋಡೋದು ಈಸ್ಟ್ ಆದವನ್ನ ಬರೆದು ಇಟ್ಕೊಳ್ಳೋದು, ಮೊದಲಿನಿಂದಲೂ ಅದೊಂದು ಹವ್ಯಾಸ . ಇತ್ತೀಚೆಗೆ ನನಗೆ ತುಂಬಾ ಸೆಳಿತಿರೋದು ಈ ವಾಟ್ಸ್ಆಪ್ status ಗಳು . ಕೆಲವೊಂದು ಸ್ಪೂರ್ತಿದಾಯಕ ಆಗಿರ್ತವೆ , ಕೆಲವೊಂದು funny ಯಾಗೀರ್ತವೆ, ಇನ್ನೂ ಕೆಲವು ವಿಷಾದಮಯವಾಗೀರ್ತವೆ . ಅವರ status ಓದಿದರೆ ಅವರ ಸದ್ಯದ ಮನಸ್ತಿತಿ (ನೋವು ಅಥವಾ ನಲಿವು) ಅರಿಯಬಹುದು . ಹತ್ತು ಜನರಲ್ಲಿ ಆರು ಜನ ಈ ವಿಷಾದಮಯವಾದ status ಗಳೆ ಇಟ್ಟಿರ್ತಾರೆ,  ಪಾಪ ಅನ್ಸತ್ತೆ . ಈ ಹತ್ತು ಜನರಲ್ಲಿ ನಾಲ್ಕು ಜನ ಮಾತ್ರ ಖುಷಿಯಾಗಿರೋದಾ ? ಉಳಿದ ಆರು ಜನಕ್ಕೆ ನಗಲಾರದಂತಹ ನೋವುಗಳಿವೆಯಾ  ಅಂತ ಹುಡುಕಿದರೆ,  ಜಗತ್ತಿನಲ್ಲಿ ಇರದ ಸಮಸ್ಯೆ ಏನೂ ಇರುವುದಿಲ್ಲ .
ಮೊನ್ನೆ ನನ್ನ ಗೆಳೆಯನೊಬ್ಬನ status ಓದಿದೆ. ಸಂಬಂಧ ಗಳಿಗೆ ಬೆಲೆಯಿಲ್ಲ ಎಲ್ಲರೂ ನಾಟಕ ಆಡ್ತಾರೆ ಅನ್ನೊ ಅರ್ಥದಲ್ಲಿತ್ತು. call ಮಾಡಿ, ಯಾಕ್ಲೇ ಎನ್ ಆಯ್ತು ಅಂದೆ . ಅಕಿ ದಿನಾ ಮುಂಜಾನೆ 8ಕ್ಕ good morning ವಿಶ್ ಮಾಡ್ತಿದ್ಲು,  ಈವತ್ತ 10 ಗಂಟೆ ಆದ್ರೂ msg ಬಂದಿಲ್ಲ ಅಂದ. ಅದಕ್ಯಾಕ ಅಸ್ಟ ತೆಲಿ ಕೆಡಸ್ಕೊಂಡಿಲೆ. ಮನೇಲಿ ಏನೊ ಕೆಲ್ಸ ಇರ್ಬೋದು , mobile ಚಾರ್ಜ ಇರ್ಲೀಕೀಲ್ಲ, ಇಲ್ಲಾಂದ್ರೆ net ಖಾಲಿ ಅಗೀರ್ಬೋದು. ಎಲ್ಲನೂ ಸರಿ ಇದ್ದೂ ನಿನಗೆ msg ಬಂದಿಲ್ಲ ಅಂದ್ರೆ,  ನಿನ್ ಜೊತೆ chat ಮಾಡೋಕೆ ಈಸ್ಟ ಇಲ್ದೆ ಇರ್ಬೋದು. ಬಲವಂತವಾಗಿ  ಯಾವ ಖುಷಿಯನ್ನೂ ತುಂಬಾ ಹೊತ್ತು ಪಡಿಯೋಕ ಆಗಲ್ಲ ಅಂದೆ. ಏ ಸೂಮ್ಮಿರ್ಲೇ ನಿ ಏನರೆ ಮಾತಾಡ್ಬೇಡ,  ನಿನಗ ಏನೂ ಗೊತ್ತ ಆಗಲ್ಲ ಅಂದ.
ಇದೆ ಮಾತು ಇನ್ನೊಬ್ಬ ಸ್ನೇಹಿತನಿಗೂ ಕೇಳಿದೆ ,  ಆತ ಕೂಡಾ ನಿ ಎನ್ ಬಿಡಪ್ಪಾ ಆರಾಮ್ ಅದಿ ನಮ್ ಚಿಂತಿ ನಮಗ,  ನಿನಗ ಅರ್ಥ ಆಗಲ್ಲ ಅಂದ .
ನನಗೆ ಯವುದೇ ಕೊರತೆ ಚಿಂತೆ ಇಲ್ಲ , ನಾ ಆರಾಮ ಅದಿನಿ ಅನ್ನೊ ಮನುಷ್ಯ ಯಾರಾದರೂ ಇದಾರಾ ಜಗತಲ್ಲಿ ?
ಚಿಕ್ಕ ವಯಸಲ್ಲಿ ತಾಯಿಯ ಕಳೆದುಕೊಂಡ ಅನಾಥ ಮಕ್ಕಳು ,  ಓದು ತಲೆಗೆ ಹತ್ತದೆ ಎಲ್ಲರಿಂದ ದಡ್ಡ ಆನಿಸಿಕೊಂಡು ಅವಮಾನಕ್ಕಿಡಾಗುವ ವಿದ್ಯಾರ್ಥಿ, ಉನ್ನತ ವ್ಯಾಸಂಗಕ್ಕೆ ಹಣವಿಲ್ಲದೆ ವದ್ದಾಡುವ ಬುದ್ದಿವಂತ , ಡಿಗ್ರಿ ಮುಗಿದರೂ ಸರಿಯಾದ ಉದ್ಯೋಗ ಸಿಗದೆ ಉಪವಾಸ ಅಲೆದಾಡುವ ನಿರುದ್ಯೋಗಿ, ಮದುವೆಯಾಗಿ ವರುಷಗಳೆ ಕಳೆದರೂ  ಮಕ್ಕಳಿಲ್ಲವೆಂದು ಕೊರಗುವ ಬಂಜೆ , ಅತಿ ಚಿಕ್ಕ ವಯಸಲ್ಲೇ ವೀರ ಮರಣವನಪ್ಪಿದ ಯೋಧನ ತಾಯಿ ,  ಹೆಂಡತಿ ಅನೈತಿಕ ಸಂಬಂಧ ಹೊಂದಿದರೂ ಬುದ್ದಿ ಹೇಳಲಾಗದ ಸ್ಥಿತಿಯಲ್ಲಿನ ಅಸಹಾಯಕ ಗಂಡಸು,  ಅರಮನೆಯಂತ ಮನೆ - ಮನೆ ತುಂಬಾ ಮಕ್ಕಳಿದ್ದರೂ ಕೊನೆ ದಿನಗಳನ್ನ ವ್ರುದ್ದಾಶ್ರಮದಲ್ಲಿ ಕಳೆಯುವುದಾಯ್ತು ಎಂದು ಹತಾಶರಾದ ವ್ರುದ್ದರು. ಹೀಗೆ ಹುಟ್ಟಿನಿಂದ ಸಾವಿನೆಡೆಗೆ ಸಾಗಿ ಬರುವ ಎಲ್ಲರೂ,  ಬದುಕು ತಂದೊಡ್ಡುವ ಒಂದಿಲ್ಲೊಂದು ಅನಿರೀಕ್ಷಿತ ತಿರುವುಗಳಿಗೆ ತುತ್ತಾದವರೆ. ಆದರೂ,  ಇರುವ ಸಿರಿಯ ನೆನೆದು ಬಾರೆನೆಂಬುವುದು ಬಿಡು ಹರುಷಕ್ಕಿದೆ ದಾರಿ ಎಂಬ ಹಿರಿಯರ ಮಾತಿನಂತೆ ಬದುಕುವುದಿಲ್ಲವಾ ?
ಯಾರೊ ಒಬ್ರು msg ಮಾಡ್ಲಿಲ್ಲ , ಮಾತಾಡ್ಲಿಲ್ಲ ಅನ್ನೊ ಸಣ್ಣ ಕಾರಣಕ್ಕೆ ,  ಇಡಿ ದಿನದ ನಮ್ಮ ಚಿನ್ನದಂತ ಕ್ಷಣಗಳನ್ನ  ವಿಷಾದದಿಂದ ಕಳೆಯುವುದರಲ್ಲಿ ಯಾವ ಅರ್ಥ ಇದೆ ಹೇಳಿ ?
so be haapy .. ಇಸ್ಟ ಆದ್ರೆ ಇತರರಿಗೂ share ಮಾಡಿ ......ಸಿದ್ದು

Comments

  1. ಕ್ಷಣಿಕ ಸುಖದ ಬೆನ್ನತ್ತಿ ಹೋಗುತ್ತಿರುವ ಮನುಷ್ಯ, ಅಂದಿನ ದಿನವನ್ನು ಸುಮ್ಮನೆ ವ್ಯರ್ಥ ಮಾಡುತ್ತಾನೆ.....

    ReplyDelete
  2. Hmm nija ellargu chinte irtavu but irutana happy agirbeku Anna that's life

    ReplyDelete
  3. 👏👍🙏 Nijavaglu very true Anna..

    ReplyDelete

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ