ಭಕ್ತಿ ಇರಲಿ, ಭಯ ಬೇಡ.
ನಿನ್ನೆ ಸ್ನೇಹಿತನೊಬ್ಬ call ಮಾಡಿದ್ದ , ಪರಸ್ಪರ ಕುಶಲೋಪರಿ ವಿನಿಮಯದ ನಂತರ, ದೇವರ ಕುರಿತು ಒಂದು ಮಾತು ಕೇಳೋದಿತ್ತು ನಿನಗೆ ಅಂದ. ನಾ ಎನ್ ಶಾಣ್ಯಾ ಅದಿನೇಂತ ಕೇಳತೊ ಮಾರಾಯ ಅಂದೆ ನಾನು. ಏ ಹಂಗೇನಿಲ್ಲ, ನೀ ಅವೂ ಇವೂ ಪುಸ್ತಕಾ ಓದ್ತತಿ, ಮತ್ತ ಸಿದ್ದೇಶ್ವರ ಸ್ವಾಮೀಜಿ ಪ್ರವಚನಾನೂ ಸ್ವಲ್ಪ ಕೇಳ್ತೀ, ನಂಗ್ ಗೊತ್ತದ ಅದಕ್ಕ ಅಂದ. ಆಯ್ತು ಕೇಳಪ್ಪ ತಿಳಿದಸ್ಟ ಹೇಳ್ತೀನಿ ಅಂದೆ.
ಎನಿಲ್ಲ, ವಾಟ್ಸಪ್ಪ ನಲ್ಲಿ ಈಗೊಂದು msg ಬಂದಿತ್ತು ದೇವರ ಕುರಿತಾಗಿ. ಈ msg ನ 10 ಜನರಿಗೆ ಕಳಿಸಿರಿ, 10 ನಿಮಿಷ ದಲ್ಲಿ ಒಳ್ಳೆ ಸುದ್ದಿ ಕೇಳ್ತೀರಿ ನೇಗ್ಲೇಕ್ಟ ಮಾಡದ್ರೆ ಕೇಡಾಗುತ್ತೇ ಅಂತ ಇದೆ, ನಿಜಾನಾ ? ಅಂದ . ನೋಡ್ ದೋಸ್ತ ನಡೆದ್ರ ದಾರಿ ಸಾಗ್ತದ , ದುಡದ್ರ ಹೊಟ್ಟಿ ತುಮ್ತದ, ಇಂಗ್ msg ಫಾರ್ವರ್ಡ್ ಮಾಡದ್ರ ಒಳ್ಳೇದು ಆಗಲ್ಲ ಕೆಟ್ಟದ್ದೂ ಆಗಲ್ಲ. ಅಸ್ಟಕ್ಕು ಈ msg ನ ನಮ್ಮಂತಹ ಮನುಷ್ಯ ರೆಡಿ ಮಾಡಿದ್ದೆ ಹೊರತು , ಯಾವ ದೇವರು ಬಂದು ಹಿಂಗ ಹೇಳಿಲ್ಲ ಅಂದೆ . ಅದ್ರೂ ಅತನಿಗೆ ಸಮಾಧಾನ ಅಗಲಿಲ್ಲ . ಯಾಕೊ ಭಯಾ ಆಗಾತಾದೊ ಅಂದ . ದೇವರ ಮ್ಯಾಲ ಭಕ್ತಿ ಇರಬೇಕು , ಭಯ ಇರಬಾರದು . ಭಯಕ್ಕೂ ಭಕ್ತಿಗೂ ಭಾಳ ವ್ಯತ್ಯಾಸ ಅದ, ಅದೆಲ್ಲ ಇರ್ಲಿ. T V ಒಳಗ ಒಂದು ಕಾರ್ಯಕ್ರಮ ಬರತಿತ್ತ ವೀಕೆಂಡ್ ವಿತ್ ರಮೇಶ್ ಅಂತ ನೋಡಿ ಇಲ್ಲ ಅಂದೆ . ಹೂಂ ನೋಡಿನಿ ಅಂದ . ನಾನೂ ಎನ್ ಜಾಸ್ತಿ ನೋಡಿಲ್ಲ ಕೆಲವೊಂದು ಎಪಿಸೋಡ್ ಅಸ್ಟೆ ನೋಡಿನಿ . ಅಲ್ಲಿ ಬಂದು ತಮ್ಮ ತಮ್ಮ ಅನುಭವ ಹಂಚಿಕೊಂಡ ಎಲ್ಲ ಸಾಧಕರ ಯಶಸ್ಸಿನ ಹಿಂದೆ , ಅವರ ಪರಿಶ್ರಮ ಪ್ರಯತ್ನ ಇದೆ ಹೊರತು ಈ ಥರದ ಯವುದೇ msg ಗಿಮಿಕ್ ಇಲ್ಲ ಅಂದೆ . ಆತನೀಗಾಗ ಸ್ವಲ್ಪ ಸಮಾಧಾನ .
ಸ್ನೇಹಿತರೆ , ಈ ಸಂದರ್ಭ ದಲ್ಲಿ ನನಗೊಂದು ಘಟನೆ ನೆನಪಾಗ್ತದೆ. ನನಗಾಗ 8 ರಿಂದ 10 ವರ್ಷ ಇರ್ಬೋದು , ಸ್ವಲ್ಪ ಸ್ವಲ್ಪ ತಿಳೀತಿತ್ತು . ಆಗ ಮೊಬೈಲ್ ಇರಲಿಲ್ಲ , ನಮ್ಮೂರಿನ ಕೆಲ ಶ್ರೀಮಂತರ ಮನೆಗಳಲ್ಲಿ ಲ್ಯಾಂಡ್ ಫೋನ್ ಗಳಿದ್ದು . ಊರಿಂದ ಊರಿಗೆ ಪತ್ರ ಬರೇಯುತೀದ್ದ ಕಾಲವದು . ಆಗ ನಮ್ಮ ಮನೆಗೊಂದು ಪತ್ರ ಬಂದಿತ್ತು . post man ನಮ್ಮ ಅವ್ವನ ಕೈಯ್ಯಾಗ ಕೊಟ್ಟು ಹೋಗಿದ್ದ . ಅದು ಓದಿ ನಮ್ ಅವ್ವ ದೇವರ ಜಗಲಿ ಮ್ಯಾಲ ಇಟ್ಟಿದ್ಲು. ಹೊರಗಡೆ ಆಟ ಆಡಲು ಹೋದ ನಾನು ಮನೆಗೆ ಬಂದೆ , ಅಸ್ಟರಲ್ಲಿ ಅಪ್ಪಾ ನೂ ಬಂದ್ರು . ಅವ್ವ ಪತ್ರದ ವಿಷಯ ತಿಳಿಸಿದ ಮೇಲೆ , ನಮ್ಮಪ್ಪ ದೇವರ ಮನೇಲಿ ಕೂತು ಶ್ರೇದ್ದೇ ಭಕ್ತಿಯಿಂದ ಆ ಪತ್ರ ಓದಿ, ಅಲ್ಲೇ ಇಟ್ಟು ಹೊರಗಡೆ ಹೋದ್ರು. ಯಾವ ಪತ್ರಕ್ಕೂ ಸೀಗದೀರೋ ರಾಜ ಮರ್ಯಾದೆ ಈ ಪತ್ರಕ್ಕೆ ಸೀಗ್ತೀದೇಯಲ್ಲ ಏನಿದೆ ಅದರಲ್ಲಿ ಅನ್ನೊ ಕುತೂಹಲ ತಡಿಲಾರದೆ, ನಾನೂ ಆ ಪತ್ರ ಓದಿದೆ .ನನಗೀಗ ಆ ಪತ್ರದ ಪ್ರತಿ ಸಾಲೂ ನೆನಪಿಲ್ಲ ಅದ್ರೆ ಅದರ ಸಾರಾಂಶ ನೆನಪಿದೆ . ಅದೇನೆಂದರೆ , , ,ಒಂದು ಬದಿಯಲ್ಲಿ ಗತ್ತರಗೀಯ ಶ್ರೀ ಭಾಗಮ್ಮ ರ ಪರಿಚಯ ಮತ್ತು ಪವಾಡಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಲಾಗಿತ್ತು .ಇನ್ನೊಂದು ಬದಿಯಲ್ಲಿ , , , , ಇದೆ ಥರ 5 ಪಾತ್ರಗಳನ್ನ ಬರೆದು ನಿಮ್ಮ ಪರಿಚಯ ದವರಿಗೆ ಕಳಿಸಿ. ಒಬ್ಬ ವ್ಯಾಪಾರಿ ಹೀಗೆ ಮಾಡಿದ ಅವನು ಲಾಭ ಪಡೆದ , ಒಬ್ಬ ನಿರ್ಲಕ್ಷ ಮಾಡಿದ ಆತ ದಿವಾಳಿ ಯಾದ ಅನ್ನೊ ಸಾಲುಗಳು ಸೇರೀಸಲಾಗೀತ್ತು. ನಮ್ಮ ಅಪ್ಪ ಅಮ್ಮನಿಗೆ ದೇವರ ಮೇಲೆ ಸ್ವಲ್ಪ ಜಾಸ್ತಿನೇ ಭಯ ಭಕ್ತಿ . ಮರುದಿನ 5 ಕಾರ್ಡ್ ತಂದು ಪೋಸ್ಟ್ ಮಾಡಿದ್ದೂ ಆಯ್ತು . ಅದಾದ ಮೇಲೆ ನಮ್ಮ ಮನೆಯಲ್ಲಿ, ಸಾವು ನೋವು ಗಳಾದವು - ಮದುವೆ ಮಕ್ಕಳು ಆದವು. ನಮ್ಮ ಮೇಲೆ ಆ ಪತ್ರದ ಕೆಟ್ಟ ಪ್ರಭಾವವು ಅಗಲಿಲ್ಲ ಒಳ್ಳೆ ಪ್ರಭಾವವು ಅಗಲಿಲ್ಲ .
ಆ ಪತ್ರದ ಮುಂದುವರಿದ ಭಾಗವೇ ಈ msg ನ 10 ಜನರಿಗೆ ಫಾರ್ವರ್ಡ್ ಮಾಡ್ರಿ ಅನ್ನೊ ಗಿಮಿಕ್ ಸ್ನೇಹಿತರೆ . ನಮ್ಮ ತಮ್ಮ ಶರಣು ಶ್ರೇದ್ದೇಯಿಂದ ಓದಿದ , ಸರಕಾರಿ ನೌಕರಿ ಪಡೆದ . 5 ರಿಂದ 6 ಗಂಟೆ duty ಮಾಡ್ತಾನೆ ತಿಂಗಳಿಗೆ 25 ಸಾವಿರ(ಸದ್ಯ) ಪೇಮೆಂಟ್ ತಗೋತಾನೆ . ನಾನು ಓದೊ ಟೈಮ್ ಲ್ಲಿ ಸರಿಯಾಗಿ ಓದಲಿಲ್ಲ , ಪ್ರೈವೇಟ್ ನಲ್ಲಿ 12 ಗಂಟೆ duty ಮಾಡ್ತಿನಿ 10 ಸಾವಿರ ಪೇಮೆಂಟ್ ತಗೋತೀನಿ .
ನಮ್ಮ ಸ್ಥಿತಿ ಗತಿ - ಯಶಸ್ಸು, ನಮ್ಮ ಪ್ರಯತ್ನ ಪರಿಶ್ರಮ ದ ಮೇಲೆ ನಿರ್ಧಾರ ವಾಗುತ್ತದೆ ವಿನಃ ಇಂತಹ ಹುಚ್ಚು ನಮ್ಬಿಕೇ ಗಳಿಂದ ಅಲ್ಲ .
ದಿನಾ ಬೆಳಗಾದರೆ ವಾಟ್ಸಪ ನಲ್ಲಿ ಕೆಲವೊಂದು ಒಳ್ಳೆ msg ಬರ್ತವೆ , ಅಂತವನ್ನ ಫಾರ್ವರ್ಡ್ ಮಾಡಿ ಇನ್ನೊಬರಿಗೆ ಸ್ಪೂರ್ತಿ ತುಮ್ಬಿ, ಜೋಕ್ ಫಾರ್ವರ್ಡ್ ಮಾಡಿ ಇನ್ನೊಬ್ಬರ ಮುಖದಲ್ಲಿ ನಗು ತುಮ್ಬಿ . ಈ ಥರ ಸುಳ್ಳು ನಮ್ಬಿಕೇ ಸಾರುವ msg ಫಾರ್ವರ್ಡ್ ಮಾಡಿ ಇತರರಲ್ಲಿ ಭಯ ಹುಟ್ಟಿಸ್ಬೇಡಿ plz .
ಸರಿ ಅನಿಸಿದರೆ ನಿಮ್ಮ ಸ್ನೇಹಿತರಿಗೂ ಈ ಲಿಂಕ್ ಶೇರ್ ಮಾಡಿ ....ಸಿದ್ದು
Comments
Post a Comment