ನಿಮ್ಮವರೇ ನಿಮ್ಮಿಂದ ದೂರಾದರೆ ?
ಒಂದೆ ಜಾತಿ ಅಲ್ಲ , ಒಂದೆ ಕುಲ ಅಲ್ಲ. ಹೈಟು ವೇಟು ಒಂದ್ ಕಡೆ ಇರಲಿ ಬಣ್ಣ ಭಾವನೆ ಕೂಡಾ ಒಂದಲ್ಲ . ಜೀವನದ ಯಾವುದೋ ಒಂದು ಘಳಿಗೆ ಲಿ ಆತ ಅಥವಾ ಅವಳು ಜೊತೆ ಆಗತಾನೆ(ಳೆ). ಇಷ್ಟನೊ ಕಷ್ಟನೊ ಹೋಂದಿಕೋತಿರಿ, ಕಷ್ಟ ಸುಖ ಹಂಚಿಕೋತಿರಿ , ನಿಮಗರಿವಿಲ್ಲದಂತೆ ಒಂದು ಸ್ನೇಹ ಬಲಿತು ಬಿಡುತ್ತದೆ . ಅಚಾನಕ್ಕಾಗಿ ಆದ ಪರಿಚಯ ಅನಿವಾರ್ಯ ಅಗಿ ಬಿಡ್ತದೆ. ಅದು ಸರಿಯೋ ? ತಪ್ಪೊ ? ಕ್ಯಾಲ್ಕುಲೇಷನ್ ಕೂಡಾ ಮಾಡೋಕ್ ಹೋಗಲ್ಲ ನೀವು. ಯಾಕಂದ್ರೆ, ಯಾವ ಕಲ್ಮಶ ಇಲ್ಲದ ಒಂದಿಷ್ಟು ತಿಳಿಯಾದ ಆತ್ಮಾನಂದ ನೀಮ್ಮೇದೇಯಲ್ಲಿ ತೇಲುತ್ತಿರುತ್ತದೆ . ನೀವದನ್ನ ಬಯಸಿಲ್ಲ, ಬೇಕು ಅಂತ ಆರ್ಡರ್ ಮಾಡಿಲ್ಲ ತಾನಾಗೆ ಬಂದ ಉಡುಗೊರೆ . ಬೇಡ ಎನ್ನಲು ಹೇಗೆ ಸಾದ್ಯ .ಬಯಸದೆ ಬಂದ ಖುಷಿಯನ್ನ ಸವಿಯುವ ಭರದಲ್ಲಿ ಅದಕ್ಕೆ ದಾಸರಾಗ್ತಿರಿ, ಸೋಲ್ತೀರೀ , ಕೊನೆಗೊಂದಿನ ಬಿಟ್ಟಿರಲಾಗದ ಭಾವಕ್ಕೆ ಸೆರೆಯಾಗ್ತಿರಿ . ಅವರ ಮಾತು , ಅವರ ನಗು , ಅವರ ಸಾಮೀಪ್ಯ , ಅವರ ಸಾಂತ್ವನ , ಎಲ್ಲವಕ್ಕೂ ಅಡಿಕ್ಟ್ ಆಗ್ತೀರೀ . ಎಲ್ಲಿಯವರೇಗೇ ಅಂದರೆ , ದಿನಕ್ಕೆ ಒಮ್ಮೆಯಾದರೂ ಅವರೊಡನೆ ಮಾತಾಡಬೇಕು , ತಮಾಷೆ ಮಾಡಿ ನಗಾಡಬೇಕು, ಇರೊ ಸಣ್ಣ ಪುಟ್ಟ ನೋವೆಲ್ಲ ಹೇಳಿ ಅವರ ಸಾಂತ್ವನದ ನುಡಿಯಲ್ಲಿ ಹಗುರಾಗಬೇಕು, ಕೊನೆ ಪಕ್ಷ ಏನರೇ ಒಂದು ತಪ್ಪು ಮಾಡಿ ಅವರ ಕಡೆಯಿಂದ ಬೈಸಿಕೊಂಡರೂ ಪರವಾಗಿಲ್ಲ , ದಿನಕ್ಕೆ ಒಮ್ಮೆಯಾದರೂ ಅವರ ಸಾಮೀಪ್ಯ ಸಾಧಿಸಬೇಕು ಅನ್ನೊವರೆಗೂ.
ಮೊದ ಮೊದಲು ಎಲ್ಲ ಸರಾಗವಾಗಿಯೇ ನಡಿಯುತ್ತಿರುತ್ತದೆ ಕೀ ಕೊಟ್ಟ ಗಡಿಯಾರದ ಹಾಗೆ. ಆದರೆ ದಿನ ಕಳೆದಂತೆ ಆ ಸ್ನೇಹದ ಬೆಸುಗೆ ಸಡಿಲವಾಗುತ್ತ ಬರುತ್ತದೆ. ಇಷ್ಟು ದಿನ ನಿಮಗೆ ಅಂಟಿಕೊಂಡವರು ಇದ್ದಕಿದ್ದಂತೆ ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಾರೆ. ಗೊತ್ತೂ ಗೊತ್ತಾಗದಂತೆ ನಿಮ್ಮನ್ನ ಅವಾಯ್ಡ್ ಮಾಡೋಕೆ ಶುರು ಮಾಡ್ತಾರೆ . ಯಾಕೆ ಹೀಗೆ ಅಂತ ಪ್ರಶ್ನೆ ಮಾಡುವ ಧೈರ್ಯ ಕೂಡ ನಿಮಗಾಗಲ್ಲ. ಯಾಕಂದ್ರೆ ನಿಮ್ಮ ಮನಸ್ಸೇ ಆ ದೂರನ್ನ ಒಪ್ಪಿಕೊಳ್ಳಲು ಸೀದ್ದವೀರೋದಿಲ್ಲ . ಅದ್ಹೇಗೆ ಧೈರ್ಯವಾಗಿ ಪ್ರಶ್ನೆ ಮಾಡ್ತೀರಿ ?
ಸ್ವಲ್ಪ ಗಟ್ಟಿ ಇರೋರು , ಹೋಗ್ಲಿ ಬಿಡಮ್ಮ ಯಾರನ್ನೂ ಬಲವಂತದಿಂದ ಹಿಡಿದಿಡೋಕೆ ಸಾದ್ಯವಿಲ್ಲ. ಬರೋರಿಗೆ ವೆಲಕಮ್ , ಹೋಗೋರೀಗೇ ಹ್ಯಾಪಿ ಜರ್ನಿ ಅಂತ ಸುಮ್ಮನಾಗತಾರೇ . ಆದ್ರೆ ಕೆಲ ಸೂಕ್ಷ್ಮ ಮನಸೀನೋರು , ಯಾಕೆ ಹೀಗಾಯ್ತು ? ನನ್ನಿಂದ ಏನರೇ ತಪ್ಪು ನಡೀತಾ ? etc ಎಲ್ಲ ಥಿಂಕ ಮಾಡ್ತಾ ಕೂತಿರ್ತಾರೆ .
ಒಂದ್ ಸಿಂಪಲ ಲಾಜಿಕ್ ಹೇಳಲಾ. ಕೆಲವೊಂದು ಹೊಟೇಲ್ ಗಳಲ್ಲಿ ಒಂದೊಂದು ಸ್ಪೆಷಾಲಿಟಿ ಇರ್ತವೆ. ಒಂದ್ ಹೊಟೇಲ್ ದೋಸೆ ಗೆ ಫೇಮಸ್ ಆದ್ರೆ ಇನ್ನೊಂದ್ ಕಾಫಿ ಗೆ . ಒಂದ್ ಪಲಾವ್ ಗೆ ಫೇಮಸ್ ಆದ್ರೆ ಇನ್ನೊಂದ್ ಬಿರಿಯಾನಿ ಗೆ , ಸೊ ಒಂದೆ ಸೂರಿನಡಿ ನಿಮಗೆ ವೆಜ್ & ನಾನ್ ವೆಜ್ ಸಿಗೋದು ತುಂಬ ಕಡಿಮೆ . ಒಂದಿನ ನಿಮಗೆ ದೋಸೆ ತೀನಬೇಕು ಅನಿಸ್ತದೆ . ಒಂದ್ ಹೊಟೇಲ್ ಗ ಹೋಗ್ತೀರಿ . ಅಲ್ಲಿ ಇಡ್ಲಿ ವಡ etc ಎಲ್ಲ ಇರ್ತದೆ ದೋಸೆ ಇರಲ್ಲ . ಆಗ ಎನ್ ಮಾಡ್ತೀರ ? ಇನ್ನೊಂದ್ ಹೊಟೇಲ್ ಹುಡುಕಿಕೊಂಡ ಹೋಗ್ತೀರ . ಮೊದಲನೆ ಹೊಟೇಲ್ ಬೀಟ್ ಬಂದಿರಿ ಅಂದ ಮಾತ್ರಕ್ಕೆ, ಆ ಹೊಟೇಲ್ ಚನ್ನಾಗಿಲ್ಲ ಅಂತಲ್ಲ . ಅಲ್ಲಿ ದೋಸೆ ಇಲ್ಲ ಅಷ್ಟೇ . ಇವತ್ತು ದಿನನಿತ್ಯ ನಮ್ಮ ಜೀವನದಲ್ಲಿ ಘಟಿಸೊ ಅದೆಷ್ಟೋ ಸಂಭಂದ ಗಳ ಹಿಂದೆ , ನಮ್ಮಿಂದ ಏನೊ ಒಂದ್ ಎಕ್ಸ್ಪೆಕ್ಟೇಶನ್ ಅವರಲ್ಲಿ ಇದ್ದೆ ಇರ್ತದೆ .
ಎಲ್ಲ ಕ್ವಾಲಿಟಿ ನೂ ಎಲ್ಲರ ಹತ್ರ ಇರಲ್ಲ . ಕೆಲವರು ತುಂಬ ಜಾಲೀಯಾಗೀ ಇರ್ತಾರೆ , ಕೆಲವರು ಸಣ್ಣ ಪುಟ್ಟದಕ್ಕೂ ತುಂಬ ಭಾವುಕರಾಗ್ತಾರೇ. ಅದು ತಪ್ಪು ಸರಿ ಅಂತಲ್ಲ , ಅದು ಅವರ ಇಷ್ಟ ಕಷ್ಟ ಕ್ಕೆ ಬಿಟ್ಟ ವಿಷಯ . ಹಾಗೆ ಕೆಲವರಿಗೆ ಜಾಲೀಯಾಗೀ ಇರೋರ್ ಅಂದ್ರೆ ಇಷ್ಟ , ಕೆಲವರಿಗೆ ಭಾವುಕರು ಅಂದ್ರೆ ಇಷ್ಟ . ಕೆಲವರಿಗೆ ಗಂಭೀರತೆ ಇಷ್ಟ , ಕೆಲವರಿಗೆ ಪೋಲಿತನ ಇಷ್ಟ . ಬಟ್ ಈ ಎಲ್ಲ ಗುಣಗಳೂ ಒಬ್ಬರ ಹತ್ರಾನೇ ಇರಲು ಹೇಗೆ ಸಾದ್ಯ ? ಅಲ್ವಾ .
ಯಾರೋ ಒಬ್ಬರು ನಿಮ್ಮಿಂದ ದೂರ ಆಗೋಕೆ ಟ್ರೈ ಮಾಡ್ತಿದಾರೆ ಅಂದ್ರೆ , ನಿಮ್ಮಲ್ಲಿ ಏನೊ ದೋಷ ಇದೆ ಅಂತಲ್ಲ . ಅವರು ಬಯಸೋದು ನಿಮ್ಮ ಹತ್ರ ಇಲ್ಲ ಅಷ್ಟೇ . ಅದ್ಹೇಗೆ ಪ್ರತಿಯೊಬ್ಬರೂ ಒಂದು ಸ್ವಾರ್ಥ ಇಟ್ಕೊಂಡು ಸ್ನೇಹ ಮಾಡ್ತಾರೆ ಅಂತ ನೀವ್ ಕೇಳಬಹುದು , ಸರಿ . ಕೇಲವೋಬ್ಬರು ಏನೊ ನಿಮ್ಮಿಂದ ಬಯಸಿಯೇ ನಿಮ್ಮ ಸ್ನೇಹ ಮಾಡಬಹುದು . ಇನ್ ಕೆಲವರು ಸ್ನೇಹ ಮಾಡಿದ ಮೇಲೆ ನಿಮ್ಮಿಂದ ಬಯಸಬಹುದು . ಆದ್ರೆ ನೀಶ್ವಾರ್ಥ ಸಂಭಂದ ಜಗತಲ್ಲೀ ಯಾವುದೂ ಇಲ್ಲ . ಒಂದ್ ಮಾತ್ ಹೇಳಲಾ . ತಂದೆ ತಾಯಿಗಳು, ಮೊದಲಿಗೆ ನಾಲ್ಕಾರು ಹೆಣ್ಣು ಆದರೂ ವಂಶದ ದೀಪಕ್ಕಾಗಿ ಒಂದ್ ಗಂಡು ಹುಟ್ಟಲಿ ಅಂತ ಬಯಸ್ತಾರೆ . ವಿಷ ಇರೋದು ದೀಪದ್ದೂ ಅಲ್ಲ ಕ್ಯಾಂಡಲ್ ದೂ ಅಲ್ಲ . ಹೆಣ್ಣು ಮಕ್ಕಳೆಲ್ಲ ನಾಳೆ ಕೋಟ್ ಮನೆಗೆ ಹೋಗ್ತಾರೆ , ನಮ್ಮ ಕೊನೆಗಾಲ್ದಲ್ಲಿ ನೋಡ್ಕೋಳ್ಳೋಕೆ ಒಂದ್ ಗಂಡಿರಲಿ ಅನ್ನೋದ್ ಅಷ್ಟೇ. ದೇವರು ಅಂತ ಪೂಜಿಸೋ ತಂದೆ ತಾಯಿ ಸಂಭಂಧದಲ್ಲೇ ಒಂದು ಸಣ್ಣ ಸ್ವಾರ್ಥ ಇದೆ ಅಂದ ಮೇಲೆ , ಇತರರು ನಮ್ಮಿಂದ ಒಂದು ನಗು , ಒಂದ್ ನಾಚಿಕೆ , ಒಂದಿಷ್ಟು ಪ್ರೀತಿ ಒಂದಿಷ್ಟು ಸಲುಗೆ , ಒಂದ್ ಸ್ನೇಹ , ಒಂದ್ ಸಾಮೀಪ್ಯ ಬಯಸೋದರಲ್ಲಿ , ಅದು ನಮ್ಮಲ್ಲಿ ಸಿಗದಿದ್ದಾಗ ನಮ್ಮಿಂದ ದೂರ ಆಗೊದ್ರಲ್ಲಿ ಎನ್ ಆಶ್ಚರ್ಯ ಇಲ್ಲ. ಆಗಲೇ ಹೇಳದೆ ಅಲ್ವಾ , ಯಾರೊ ನಮ್ಮಿಂದ ದೂರ ಆಗ್ತೀದಾರೇ ಅಂದ್ರೆ ನಮ್ಮಲ್ಲಿ ಏನೊ ತಪ್ಪಿದೆ , ಕೊರತೆ ಇದೆ ಅಂತಲ್ಲ . ಅವರು ಬಯಸೋದು ನಮ್ಮಲ್ಲಿ ಇಲ್ಲ ಅಷ್ಟೇ .
ಸೊ, ಎಲ್ಲರನ್ನ ತಣಿಸೊ ಎಲ್ಲ ಗುಣಗಳು ಎಲ್ಲರಲ್ಲಿ ಇರಲು ಸಾದ್ಯವಿಲ್ಲ . ಯಾರ್ ಗೋಸ್ಕರನೊ ಬದಲಾಗದೆ ನೀವ್ ನೀವಾಗೀರೀ. ಬಂದೋರಿಗೆ ನೀಮ್ಮತನ ಉಣಬಡಿಸಿ , ಹೋಗೋರೀಗೇ ನಿಮ್ಮ ಶೈಲಿಯಲ್ಲೇ ಬೈ ಹೇಳಿ . ಬಟ್ ಯಾರೋ ದೂರ ಅದ್ರೂ ಅಂತ ಕೋರಗಬೇಡಿ . ಯಾವುದೆ ಲಾಭ ಇಲ್ಲ .
ಸಿದ್ದು ತಾಂಬೆ .
ಕಹಿ ಸತ್ಯ ಅಣ್ಣ..
ReplyDeleteಹೂಂ ಬ್ರದರ್
ReplyDeleteIt's really true Anna
ReplyDeleteNija anna
ReplyDelete