ಎಸ್. ಎಚ್. ಲವರ್ - 2
ಥೂ ನಿಮ್ ನಜ್ಮಕ ಇಷ್ಟು ಅಂತ ಉಗದು ಆಚೆ ಬರ್ತಿದ್ದೆ , ಆತನ ಮೊಬೈಲ್ ನಲ್ಲಿ ನನ್ನ ಕೆಲ ಫೋಟೋ ಇದ್ದಿದ್ದು ನೆನಪಾಯಿತು . ವಾಪಸ್ ಹೋಗಿ ಅತನ ಕೈಯಲ್ಲಿದ್ದ ಮೊಬೈಲ್ ತಗೊಂಡು ನನ್ನೆಲ್ಲ ಫೋಟೋ ಡಿಲೀಟ್ ಮಾಡದೆ . ಏನೂ ಮಾತಾಡದೇ ಗಾಬರಿಯಾಗಿ ಕುಳಿತು ಬಿಟ್ಟಿದ್ದ , ಏಕೆಂದರೆ ಆತ ನನ್ನಿಂದ ಈ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ . ನನ್ನ ಮನಸಲ್ಲಿ ಆತನೇಡೇಗೇ ಇದ್ದ ಎಲ್ಲ ನೆನಪುಗಳನ್ನ ಆತ ಡಿಲೀಟ್ ಮಾಡಿದ್ದ , ಆತನ ಮೊಬೈಲ್ ನಲ್ಲಿದ್ದ ನನ್ನ ನೆನಪುಗಳನ್ನ ನಾನು ಡಿಲೀಟ್ ಮಾಡಿ ಲಾಡ್ಜ್ ರೂಮಿಂದ ಜೊತೆಗೆ ಅವನ ಬದುಕಿಂದ ಎದ್ದು ಹೊರ ಬಂದೆ . ಟಿವಿ ಪೇಪರಲ್ಲಿ , ರೇಪ್ & ಮರ್ಡರ್ ಆಸಿಡ್ ದಾಳಿಯಂತಹ ಸುದ್ದಿ ನೋಡಿದಾಗ ಸೌಂದರ್ಯ ಅನ್ನೋದು ಹೆಣ್ಣಿಗೆ ಶಾಪ ಅಂತ ಅನಿಸ್ತಿತ್ತು . ಆದ್ರೆ ಕುರೂಪ ಸಹಿತ ಶಾಪ ಅಂತ ಅವತ್ ಗೊತ್ತಾಯ್ತು.
ಸಾರಿ ರಮ್ಯ , ಹಳೇದೆಲ್ಲ ನೆನಪಿಸಿ ನಿನಗೆ ಮತ್ತೆ . . . .
ಇಟ್ಸ ಓಕೆ ಅಭಿ , ಸುಳ್ಳಿನ ಸೆಳೆತ ಸಿಹಿ ಅನ್ಸತ್ತೆ , ಸತ್ಯ ಕಹಿ ಅನ್ಸತ್ತೆ, ಆದ್ರೂ ಕೊನೆಗ ಉಳಿಯೋದು ಕಹಿಯಾದ ಸತ್ಯ ನೆ ಅಲ್ವ ? ಸೊ, ಸುಳ್ಳನ್ನ ನಂಬಿದಕ್ಕೇ ಇದೆಲ್ಲ ಸಹಿಸ್ಕೋಬೇಕು.
ಹೂಂ ಅದೂ ನಿಜಾನೆ. ಹಾಂ ರಮ್ಯ, ಒಂದ್ ಮಾತ್ ಕೇಳಬೇಕಿತ್ತು .
ಏನ್ ಕೇಳು ?
ಏನಿಲ್ಲ , , ಅಪ್ಪ ಮೊಬೈಲ್ ಕೋಡ್ಸಿಲ್ಲ ಅಂತ , ಫೇಸ್ ಬುಕ್ ಪೋಸ್ಟ್ ಗೆ ಯಾರೂ ಲೈಕ್ ಮಾಡಿಲ್ಲ ಅಂತ , ತೀರ ಇಂಥ ಸಣ್ಣ ಸಣ್ಣ ವಿಷಕ್ಕೇಲ್ಲ ಈಗಿನ ಹುಡುಗೀರು ಆತ್ಮಹತ್ಯೆ ಮಾಡ್ಕೊತಿದಾರೇ , ಆದ್ರೆ ನೀವು ?
ಇಷ್ಟೆಲ್ಲ ಆದ ಮೇಲೂ ನೀನ್ಯಾಕ ಇನ್ನೂ ಬದುಕಿದೀಯ ಅಂತ ಇಂಡೈರೆಕ್ಟ್ ಆಗಿ ಕೇಳ್ತಿದೀಯಾ ಅಲಾ ?
ಹಾಗಲ್ಲ , , ಅದ್ಹೇಗೆ ಆ ಸಿಚುಯೇಶನ ಫೇಸ್ ಮಾಡದೆ ಅಂತ.
ನೋಡ್ ಬಾಸ್ ಈ ಸ್ವತಂತ್ರ್ಯ ಭಾರತದಲ್ಲಿ ನಮ್ಮಂಥವರಿಗೆ ಸಾಯೋಕೂ ಸ್ವತಂತ್ರ್ಯ ಇರಲ್ಲ , ಸಿಚುಯೇಶನ ಆ ಥರ ಇರ್ತದೆ . ಏನ್ ಗೊತ್ತಾ ? ಅಮ್ಮನ ಮೇಲೆ ಅಪ್ಪನಿಗೆ ವಿಪರೀತ ಅನುಮಾನ . ನೀನ್ಯಾಕ ಅಲ್ಲಿ ಹೋದೆ ನೀನ್ಯಾಕ ಇಲ್ಲಿ ಬಂದೆ , ಅವರ ಜೊತೆ ಏನ್ ಮಾತು ಇವರ ಜೊತೆ ಏನ್ ಕೆಲಸ ಅಂತ ಕುಡ್ದು ಬಂದು ವಿಪರೀತ ಬೈಯೋನು ಹೋಡಿಯೋನು . ಹೀಗೆ ಅನುಮಾನದಲ್ಲೇ ಕುಡ್ದು ಕುಡ್ದು ಸತ್ತ . ಅವತ್ತು , ಗಂಡ ಸತ್ತ ಅಂತ ಅಳಬೇಕೋ ? ಕಿರಿ ಕಿರಿ ತಪ್ಪತು ಅಂತ ಖುಷಿ ಪಡಬೇಕೋ ? ಫುಲ್ ಕನ್ಫೂಶನ್ ನಲ್ಲೀದ್ಲು ಅಮ್ಮ . ನೋಡದವರು ಏನಂದಾರು ಅಂತ ಅತ್ತಳು. ಅಪ್ಪ ಕುಡಿಲಿ, ಬೈಲಿ, ಹೊಡಿಲಿ ಬಟ್ ಮನೇಗೇ ಏನ್ ಬೇಕೋ ಎಲ್ಲ ತಂದ ಕೊಡ್ತಿದ್ದ . ಅಮೇಲೆ ಸಂಸಾರ ಭಾರ ಅಮ್ಮನ ಮೇಲೆ ಬಿತ್ತು . ನಾನು ಅಣ್ಣ ಆಗ ಚಿಕ್ಕವರು , ಅಮ್ಮ ನಮ್ಮನ್ನ ತುಂಬ ಕಷ್ಟದಲ್ಲಿ ಬೆಳೆಸದರು, ತಾನು ಉಪವಾಸ ಇದ್ದು ನಮ್ಮನ್ನ ಕೈ ತುತ್ತ ಕೊಟ್ಟರು . ಕೂಲಿ ಮಾಡಿ ವಿದ್ಯ ಕಲಸದ್ರು . ಇತ್ತೀಚೆಗೆ ಅಣ್ಣನ ಮದುವೆ ನೂ ಮಾಡದ್ರು. ಆದ್ರೆ ಅಣ್ಣ ಹೆಂಡತಿ ಸೆರಗ ಹಿಡ್ಕೊಂಡು ಮನೆಯಿಂದ ಆಚೆ ಹೊದ . ಈಗ ಮನೇಲಿ ಅಮ್ಮ ನಾನು . ಅವಳನ್ನ ಬಿಟ್ಟು ಹೇಗೆ ಸಾಯಲಿ . ಅಪ್ಪ ಅಮ್ಮ ಮಕ್ಕಳಿಗಾಗಿ ಏನ್ ಕಷ್ಟ ಬೇಕಾದರೂ ಸಹಿಸ್ಕೋತಾರೆ ಆದ್ರೆ ತಮ್ ಕಣ್ಣ್ ಮುಂದೆ ಮಕ್ಕಳು ಮಣ್ಣಾಗೊದನ್ನ ಯಾವ್ ತಂದೆ ತಾಯಿನೂ ಸಹಿಸಲ್ಲ . ಆದ್ರೆ ಅಣ್ಣ ಅಮ್ಮನ ಜೊತೆ ಇದ್ದಿದ್ರೆ , ಇಷ್ಟೊತ್ತಿಗೆ "ಪ್ರೀತಿಗಾಗಿ ಪ್ರಾಣ ತೆತ್ತ ಯುವತಿ" ಅಂತ ಕ್ರೈಂ ಸ್ಟೋರಿ ಲಿ ಒಂದ್ ಎಪಿಸೋಡ್ ಆಗ್ತಿದ್ದೇ, ಬಟ್ ಏನ್ ಮಾಡೋದು. ಅದಕ್ಕೆ ಹೇಳಿದ್ದು ನಮ್ಮಂಥ ಕೆಲವರಿಗೆ ಸಾಯೋಕೂ ಸ್ವತಂತ್ರ್ಯ ಇರಲ್ಲ ಅಂತ . ಮಾತು ಮುಗಿಸಿದ ರಮ್ಯ ಮುಖದಲ್ಲಿ ಮುಗುಳ್ನಗೆ , ಕೇಳ್ತಾ ಕೂತ ಅಭಿ ಕಣ್ಣಂಚಲ್ಲಿ ನೀರು .
ನಂದು ಇರಲಿ ಬಿಡು ನಿಂದೇನ ಕಥೆ ? ನಾವು ಹುಡುಗೀರು ಧೈರ್ಯ ಕಮ್ಮಿ ಅಳ್ತಾ ವಾಪಸ್ ಬರ್ತೀವಿ . ನೀನ್ ಹುಡುಗ , ಮೋಸ ಮಾಡ್ತಿದಾಳೆ ಅಂತ ಗೊತ್ತಾದಾಗ ಕಪಾಳಕ್ಕೊಂದು ಸರಿಯಾಗಿ ಬಿಡಬೇಕಿತ್ತು.
ನೀನ್ ಹೇಳೋದು ಸರಿನೇ ರಮ್ಯ. ಆದ್ರೆ, ವೈರಿ ಗುಂಡೇಟಿಗೆ ಎದೆಯೋಡ್ಡೋ ಗಂಡೇದೆಯ ಯೋಧನ ಗುಂಡಿಗೆಯೂ ಈ ಪ್ರೀತಿ ಪ್ರೆಮದ ವಿಷಯದಲ್ಲಿ ನಡುಗುತ್ತೇ. ಅಂಥದರಲ್ಲಿ ನಾವ್ ಯಾವ್ ಲೆಕ್ಕ . ಅದೆಲ್ಲ ಬೇಡ ಬಿಡು ಈಗ .
ಯಾಕ್ ಬೇಡ, ಅದೇನಿದ್ದರೂ ಹೇಳು . ನಾಳೆ ನಾವಿಬ್ಬರೂ ಮದುವೆ ಆಗೋರು , ನಮ್ಮ ಮದ್ಯ ಯಾವ ಮುಚ್ಚು ಮರೆ ನೂ ಇರಬಾರದು .
ಮುಚ್ಚು ಮರೆ ಪ್ರಶ್ನೆ ಅಲ್ಲ . ನೀನ್ ಕಸ ಗುಡಿಸಿ ರಂಗೋಲಿ ಹಾಕೋತ್ತೀಗೇ ಪಾರ್ಟ್ 2 ನೂ ಮುಗೀತಾ ಬಂತು . ಇನ್ನ ನಾನು ಎಷ್ಟೇ ಶಾರ್ಟ್ ಕಟ್ ಆಗಿ ಹೇಳದರೂ ಮಿನಿಮಮ್ ಇನ್ನೊಂದ್ ಪಾರ್ಟ್ ಆದ್ರೂ ಬೇಕು . ಪಾಪ ರೈಟರ್ ಗೆ ಕಷ್ಟ ಆಗುತ್ತೇನೋ ಅಂತ. ಡೆ ಫುಲ್ಲ್ ಡ್ಯೂಟಿ , ಸಂಜೆ IPL ಬೇರೆ ಶರು ಆಗಿದೆ ಸೊ .
ಅವನಿಗೇನ ಕಷ್ಟ ? ಕಷ್ಟ ಅನುಭವಿಸಿದವರು ನಾವು , ನಮ್ ಕಥೆ ಬರೆದು ಫೇಮಸ್ ಆಗ್ತಿರೋದು ಅವನು . ಬರೀಲಿ ಬಿಡು ನೀನ್ ಶುರು ಮಾಡು .
ಸರಿ, ಹಾಗದರೆ ಹೇಳ್ತೀನಿ ಕೇಳು . ಅವಳ ಹೆಸರು ಪ್ರಿಯಾ , ಕೈ ಕಾಲು ಕಣ್ಣು ಮೂಗು ಎಲ್ಲನೂ ಎಷ್ಟ್ ಬೇಕೊ ಅಷ್ಟ ಅಳತೆ ಕೊಟ್ಟು ಮಾಡಿಸಿದ ಹಾಗ್ ಇದ್ಲು. ಪಿಂಕ್ ಕಲರ್ ಬಟ್ಟೆ ಉಟ್ಕೊಂಡರಂತೂ , ಅವಳ ಮೈ ಬಣ್ಣ , ಬಟ್ಟೆ ಬಣ್ಣ ಎಲ್ಲ ಒಂದೆ ಅನಿಸ್ತಿತ್ತು. ಇನ್ನೊಂದ್ ವಿಷ ಏನು ಅಂದ್ರೆ, ಈ ಸುಂದರವಾಗಿ ಇರೊ ಹುಡ್ಗೀರ್ ಗೆ ಸ್ವಲ್ಪ ಕೊಲೆಸ್ಟರಾಲ್ ಜಾಸ್ತಿ . . . . .
ಮುಂದುವರೆಯುತ್ತದೆ . . . . ನಿರೀಕ್ಷಿಸಿ . . . .
ಸಿದ್ದು ತಾಂಬೆ .
Comments
Post a Comment