ಗಂಡಸರಿಗೆ ಮಾತ್ರ

ನಾನೇನು ಜಾಸ್ತಿ ಓದಿದವನಲ್ಲ, ಆಸ್ತಿ ಅಂತಸ್ತು ಅಷ್ಟಕ  ಅಷ್ಟೆ , ಒಳ್ಳೆ ಆರೋಗ್ಯ ಇಲ್ಲ , ಹೇಳಿಕೊಳ್ಳುವಂತ ಸೌಂದರ್ಯ ಕೂಡಾ ಇಲ್ಲ. ಆದ್ರೂ ನನ್ ಬಗ್ಗೆ ನನಗೆ ವಿಪರೀತ ಹೆಮ್ಮೆ , ಒಂದು ಒಳ ಜಂಭ . ಯಾಕೆ ಗೊತ್ತಾ ? ಎಂತಹ ಸಂಧರ್ಬ ಬಂದರೂ ಅದಕ್ಕೆ ಅಡ್ಜಸ್ಟ್ ಆಗುವಂತ ಗುಣ ಇದೆ, I mean ಮಾನಸಿಕವಾಗಿ ತುಂಬ ಸದ್ರುಢ ನಾನು . ಉಕ್ಕೀಬರುವ ನಗುವನ್ನು ನಿಲ್ಲಿಸಬಲ್ಲೇ , ಹರಿಯುವ ಕಣ್ಣೀರು ತಡೇಯಬಲ್ಲೇ . ನನ್ನ ಕೆಲ ವಿಚಾರಗಳು ಕೇಳಿದರೆ ನೀವು ನಗಬಹುದು . ಸಣ್ಣ ಪುಟ್ಟದಕ್ಕೂ ನಾನ್ ಯೋಚನೆ ಮಾಡಿ ಅಳಲ್ಲ , ಯಾವತ್ತಾದರೂ ಅಳಬೇಕು ಅನಿಸಿದರೆ ಏನೇನೋ ನೆನಪು ಮಾಡಿಕೊಂಡು ಬಿಕ್ಕಿ ಬಿಕ್ಕಿ ಅಳ್ತೀನಿ , ಅದು 2-3 ನಿಮಿಷ ಅಷ್ಟೆ , ಅಮೇಲೆ ಮೈ ಮನ ಹಗುರ . ಹಾಗೆ ನಗುವು ಸಹ , ಕೆಲಸಕ್ಕೆ ಬಾರದ ಜೋಕ್ ಗಳಿಗೆಲ್ಲ ನಗಲ್ಲ , ನಗಬೇಕು ಅನಿಸಿದರೆ ಏನೇನೋ ಸಣ್ಣ ಪುಟ್ಟ ಫನ್ನೀ ಮೋಮೇಂಟ ನೆನೆಸಿಕೊಂಡು ನಗ್ತಿನಿ , ಅದೂ 2-3 ನಿಮಿಷ ಅಷ್ಟೇ , ಅಮೇಲೆ ಮತ್ತೆ ನನ್ ಜೊತೆ ನಾನು . ಇದು ಬರಿ ನಗು ಅಳುವಿನ ವಿಷಯ ಅಷ್ಟೇ ಅಲ್ಲ, ನನಗೆ  ಎದುರಾಗುವ ಪ್ರತಿ ಕ್ಷಣ , ಪ್ರತಿ ನಿಮಿಷ , ಪ್ರತಿ ದಿನ ಏನೆ ಬರಲಿ ಹೀಗೆ,  ನಾನು ಖುಷಿ ಪಡಬೇಕು ಅನಿಸಿದರೆ ಮುಗೀತು ಪ್ರತಿದಿನ ಹಬ್ಬ ನೆ . ಇನ್ನೂ ಸಿಂಪಲ್ ಆಗಿ ಹೇಳೋದಾದರೆ , ಬಿಜಾಪುರ ಗಣಪತಿ ಚೌಕನ ರೈಸ್ ಬಜಿ ನೂ ತಿಂದೀದೀನಿ, ಹೈದರಾಬಾದ್ ನ ಪ್ಯಾರಡೈಸ್ ಹೊಟೇಲ್ ನಲ್ಲಿ ಬಿರಿಯಾನಿ ನೂ ತಿಂದೀದೀನಿ . ಆದರೆ ಆ ಎರಡೂ ಘಳಿಗೆಯಲ್ಲಿ ಮುಖದ ಮೇಲಿನ ಮಂದಹಾಸ , ನಾಲಿಗೆಯ ರುಚಿ , ಮನಸಿಗಾದ ಆಹ್ಲಾದ ಒಂದೆ . ಇದು ಎಲ್ಲರಿಗೂ ಸಾದ್ಯವಾಗೊದಿಲ್ಲ , ಅದಕ್ಕೆ ನನ್ ಬಗ್ಗೆ ನನಗೆ ವಿಪರೀತ ಹೆಮ್ಮೆ ಅಂದಿದ್ದು .
ಹೀಗೆ ಒಮ್ಮೆ ಯೋಚನೆ ಮಾಡ್ತಾ ಕೂತಾಗ ಒಂದ್ ವಿಚಾರ ಬಂತು . ಏನು ಅಂದ್ರೆ , ಮಾನಸಿಕ ಹಸಿವು ನಿನ್ನ ಕೈಯಲ್ಲಿದೆ ಓಕೆ ಸಿದ್ದು ಬಟ್ ದೈಹಿಕ ಹಸಿವು ? ಅದು ನಿಯಂತ್ರಿಸೋಕೇ ಸಾದ್ಯನಾ ?
ಹೌದು ಯೋಚನೆ ಮಾಡುವಂಥದ್ದು .
ಒಂದ್ ಮನಸ್ಸು ಅಂತು , ಇದೇನ್ ಮಹಾ ? ಹದಿನಾರನೆ ವಯಸ್ಸಿಗೆ ಸನ್ಯಾಸಿ ಆಗ್ತೀನಿ ಅಂತ ಹೊರಟೋನು ನಾನು , I can .
ಇನ್ನೊಂದ್ ಮನಸು ಹೇಳ್ತು , ಮೀಸೆ ಚಿಗುರೊ ಮುಂಚೆ ಸನ್ಯಾಸಿ ಆಗ್ತೀನಿ ಅನ್ನೋದು ಸುಲಭ , ಆದರೆ ಆಶೆ ಅರಳಿದ ಮೇಲೆ ಅದನ್ನ ಪಾಲಿಸೋದು ಕಷ್ಟ.
ಹೌದು ನನಗಿನ್ನೂ ನೆನಪಿದೆ . ನನಗಾಗ 16 ಇಲ್ಲ 17 ಇರಬಹುದು ವಯಸ್ಸು . ಶ್ರಾವಣ ಮಾಸದ ನೀಮೀತ್ಯ ಸಿದ್ದೇಶ್ವರ ದೇವಸ್ಥಾನದಲ್ಲಿ "ಶರಣ ಚರಿತಾಮೃತ" ಪ್ರವಚನ ಹೇಳ್ತಿದ್ರು ಈಶ್ವರ ಮಂಟೂರ ಗುರುಗಳು . ದಿನಾಲೂ ಕೇಳೋಕ ಹೋಗೋನು . ಒಂದ್ ತಿಂಗಳು ಪ್ರವಚನ ಕೇಳ್ತಿದ್ದಂತೆ ಏನೊ ಬದಲಾವಣೆ ಮನಸ್ಸಲ್ಲಿ . ಒಂದಿನ ಅಪ್ಪನ ಎದುರಿಗೆ ನಿಂತು "ಅಪ್ಪ ನಾನು ಸನ್ಯಾಸಿ ಆಗ್ತೀನಿ" ಅಂದ್ದಿದ್ದೇ.  ನನಗೇನು ನಾಲ್ಕಾರ ಮಕ್ಳ ಅದಿರಿ, ಇರೂದ ಇಬ್ರು(ಗಂಡು ಮಕ್ಕಳು) , ಹಂಗೆಲ್ಲ ಯೋಚನೆ ಮಾಡಬೇಡ ಅಂತ ಅಪ್ಪ ತಿಳಿ ಹೇಳಿದ್ದಕ್ಕೆ ಸುಮ್ಮನಾಗಿದ್ದೆ .
ಇಂತಹ ನನಗೆ ದೈಹಿಕ ಹಸಿವು ಕಟ್ಟಿ ಹಾಕೋಕೆ ಯಾಕೆ ಸಾದ್ಯವಿಲ್ಲ ?  ಪ್ರಯತ್ನ ಮಾಡೋಣ ಅನಿಸ್ತು. ಯಾಕಂದ್ರೆ, ಮನೆಯಲ್ಲಿ ಬಿಸಿ ವಯಸ್ಸಿನ ಹೆಂಡತಿ ಇದಾಳೆ,  ಹೇಗೆ ತಣಿಸೋದು ಅನ್ನೊ ಚಿಂತೆಯಿಲ್ಲ. ನಾಟಿ ಗರ್ಲ್ ಫ್ರೆಂಡ್ ಇದಾಳೆ , ಹೇಗೆ ಜೂಟ ಹೇಳೋದು ಅನ್ನೊ ಕೀಳರಿಮೆ ಇಲ್ಲ. ಪಕ್ಕದ ಮನೆ ಆಂಟಿ ಲೈನ್ ಕೊಡ್ತಿದಾಳೆ, ಹೇಗೆ ಕಣ್ ತಪ್ಸೋದು ಅನ್ನೊ ಭಯ ಇಲ್ಲ . ಆ ವಿಷಯದಲ್ಲಿ ನಾನು ಸಂಪೂರ್ಣ ಸ್ವತಂತ್ರ .
ಸೊ,  ಒಂದು ಪ್ರಯೋಗಕ್ಕೆ ಮುಂದಾದೆ . 
"ಬ್ರಹ್ಮಚರ್ಯ ಪಾಲನೆ" ಅನ್ನೊ ಪುಸ್ತಕ ತಂದೆ . ಅದರಲ್ಲಿ ಒಂದಿಷ್ಟು ಟಿಪ್ಸ್ ಇದ್ದು . ಬೆಳಗ್ಗೆ ಬೇಗ ಏಳಬೇಕು , ತಣ್ಣೀರ ಸ್ನಾನ ಮಾಡಬೇಕು , ಕೆಲ ಯೋಗಾಸನ ಮಾಡಬೇಕು , ಉಪ್ಪು ಹುಳಿ ಖಾರ ತಿನ್ನೋದು ಕಮ್ಮಿ ಮಾಡಬೇಕು, ಮನಸ್ಸು ಕೆರಳಿಸುವಂಥ ಸಂಭಾಷಣೆ ವೀಡಿಯೊ  ಕೇಳಬಾರದು ಮತ್ತು ನೋಡಬಾರದು, ಏಕಾಂತದಲ್ಲಿ ಪರಿಚಿತ ಹೆಣ್ಣುಮಕ್ಕಳನ್ನ ನೆನೆಸಿಕೊಳ್ಳಬಾರದು, ಅದ್ಯಾತ್ಮೀಕ ಪುಸ್ತಕಗಳನ್ನ ಓದಬೇಕು etc . ಅರ್ಧ ಪುಸ್ತಕ ಓದಿದೆ , ಉಳಿದ ಅರ್ಧ ಮುಚ್ಚಿಟ್ಟೇ , ಇವಿಷ್ಟು ಪಾಲಿಸೋಣ ಮೊದಲು , ನಂತರ ಉಳಿದ ಅರ್ಧ ಪುಸ್ತಕ ಓದಿದರೆ ಆಯ್ತು ಅಂತ .
ಮೇಲಿನ ಎಲ್ಲ ನಿಯಮಗಳೂ ಪಾಲಿಸಲು ಶುರು ಮಾಡಿದೆ . ತಿಂಗಳು ಕಳಿಯುವ ಹೊತ್ತಿಗೆ ಮೈ ಮನಸೆಲ್ಲ ತಟಸ್ಥ ಭಾವ. ಓಡುವ ಹಳ್ಳ, ಕುಣಿಯುವ ನದಿ ಸಮುದ್ರ ಸೇರಿ ಶಾಂತವಾದ ಅನುಭವ . ಇದಾದ ಮೇಲೆ ಒಂದಿನ ಫ್ರೆಂಡ್ಸ್ ಜೊತೆ ಸೇರಿ ಒಂದ್ ಹಿಂದಿ ಸಿನಿಮಾ ನೋಡೋಕೆ ಹೋಗಿದ್ದೆ . ಸೆಕೆಂಡ್ ಹಾಪ್ ನಲ್ಲಿ ಒಂದ್ ಸಾಂಗ್ ಶುರು ಆಗ್ತದೆ , ಆಗ ಹೀರೋಯಿನ್ ಸ್ವಿಮಿಂಗ್ ಡ್ರೆಸ್  ನಲ್ಲಿ ಸಮುದ್ರ ದಿಂದ ಎದ್ದು ಬರ್ತಾಳೆ ಸ್ಲೋ ಮೋಷನ್ ನಲ್ಲಿ . ಆಗ ಥೇಟರ್ ನಲ್ಲಿದ್ದ ಪಡ್ಡೆ ಹುಡುಗರ ಸಿಳ್ಳೆ ಕೂಗಾಟ ಶುರು . ಅಕ್ಕ ಪಕ್ಕ ನೋಡ್ತೀನಿ ಎಲ್ರೂ ಹೋಯಿ ಅಂತ ಚೀರತಿದ್ದಾರೆ, ನಂಗ್ ಏನೂ ಅನಿಸ್ತಿಲ್ಲ , ಎಪ್ಪ ಏನಾಯ್ತು ನನಗೆ ಅಂತ ಎದಿ ವಡದಂಗ ಆಯ್ತು. ಒಂದ್ ವಿಷಯ ಗೊತ್ತಾ ?
ಸ್ವಂತ ಹೊಲ ಗದ್ದೆ ಇರದಿದ್ದರೂ ಪರವಾಗಿಲ್ಲ , ಉಳುಮೆ ಮಾಡೋಕೆ ಮೈಯಲ್ಲಿ ಶಕ್ತಿ ಇರಬೇಕು ಅಂತ ಪ್ರತಿ ರೈತ ಬಯಸ್ತಾನೇ . ಹಾಗೆ ಹೆಂಡತಿ , ಗರ್ಲ್ ಫ್ರೆಂಡ್ ಇಲ್ಲದಿದ್ದರೂ ಪರವಾಗಿಲ್ಲ ಅಂಥ ಸೀಚುಯೇಶನ ಕ್ರಿಯೇಟ್ ಆದಾಗ ಮೈಯಲ್ಲಿ 100 ವೋಲ್ಟ್ ಕರೆಂಟ್ ಪಾಸಾಗಬೇಕು ಅಂಥ ಪ್ರತಿ ಗಂಡಸೂ ಬಯಸ್ತಾನೇ . ಇಲ್ಲ ಅಂದ್ರೆ ನಮ್ಮ ಅಸ್ತಿತ್ವದ ಬಗ್ಗೆ ನಮಗೆ ಡೌಟ್ ಬರ್ತದೆ , ನಮ್ಮ ಬಗ್ಗೆ ನಮಗೆ ಜಿಗುಪ್ಸೆ ಉಂಟಾಗ್ತದೆ .
ಮಾರನೆ ದಿನದಿಂದ ಆ ಪುಸ್ತಕದ ನಿಯಮಗಳ ಪಾಲಿಸೋದು ಬಿಟ್ಟೆ . ಒಂದ್ ವಾರದಲ್ಲಿ ಮತ್ತೆ ನಾನು ನಾಗಿದ್ದೆ . ಮನಸ್ಸನ್ನ ದಿನನಿತ್ಯ ಕಂಟ್ರೋಲ್ ಮಾಡ್ಕೊತೀನಿ , ದೇಹದ ವಿಷಯದಲ್ಲಿ ಗೊತ್ತಿರಲಿಲ್ಲ. ಆದ್ರೆ  ಆ ಪ್ರಯೋಗದಲ್ಲೂ ಗೆದ್ದೆ ,  ಆ ಕುರಿತು ಮತ್ತೊಂದು ಗರ್ವ ಜೊತೆಯಾಯಿತು .
ಮುಚ್ಚಿಟ್ಟ ಇನ್ನೂ ಅರ್ಧ ಪುಸ್ತಕ ಇದೆ , ಜೊತೆಗೆ ಇನ್ನೂ ಅರ್ಧ ಆಯಸ್ಸು ಕಣ್ಣ ಮುಂದೆ ತೆರೆದುಕೊಂಡಿದೆ . ಸಂಸಾರಿಯಾಗಲಿ ಸನ್ಯಾಸಿಯಾಗಲಿ , ಒಟ್ನಲ್ಲಿ ಖುಷಿಯಾಗಿರಬೇಕು ಅನ್ನೋದು ನನ್ನ ಅಭಿಪ್ರಾಯ, ಏನಂತೀರಿ ???
ಸಿದ್ದು ತಾOಬೆ

Comments

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ