ವಾಟ್ಸ್ ಅಪ್ &ಇಂಟರ್ನೆಟ್ ಇರದೆ ಇರಬಹುದಾ ?
ನನಗೊಬ್ಬ ಸ್ನೇಹಿತನಿದ್ದಾನೆ ಶಿವು ಅಂತ, ಸ್ವಲ್ಪ ವಿಚಿತ್ರ ವ್ಯೆಕ್ತಿ. ಯಾರ್ ಜೊತೆನೂ ಜಾಸ್ತಿ ಬೆರೆಯಲ್ಲ ಜಾಸ್ತಿ ಮಾತಾಡಲ್ಲ,ತಾನಾಯ್ತು ತನ್ನ ಪ್ರಪಂಚ ಆಯ್ತು ಅಂತ ಇದ್ದ ಬಿಡ್ತಾನೆ. ಮನೆಮುಂದೆ ಚಂದನೆಯ ರಂಗೋಲಿ ಹಾಕಿದ್ರೆ ದಾಟಿ ಹೋಗ್ತನೆ ಅಪ್ಪಿ ತಪ್ಪಿಯೂ ಅದನ್ನ ತುಳಿಯಲ್ಲ, ಅರಳಿರೊ ಹುವನ್ನ ಯಾವತ್ತೂ ಕಿಳಿಲ್ಲ, ಬಿದಿಯಲ್ಲಿ ಹೊಗೊ ನಾಯಿ ಮರಿಗೆ ಕನಸಲ್ಲೂ ಒಂದ್ ಕಲ್ಲಿಂದ ಹೊಡೆದವನಲ್ಲ, ಹೀಗಿರುವಾಗ ಮನುಷ್ಯರನ್ನ ನೊಯಿಸೋದು ದೂರದ ಮಾತು. ಸಂಭಾವಿತ ಸಭ್ಯಸ್ತ ಅಷ್ಟೆ ಮೂಡಿ ಮನುಷ್ಯ. ಕೆಲವೊಮ್ಮೆ ಮೊಬೈಲ್ ಆಫ್ ಮಡ್ಕೊಂಡು ಹೋದ ಅಂದ್ರೆ ವಾರ ಗಟ್ಟಲೆ ಯಾರ ಸಂಪರ್ಕಕ್ಕೂ ಸಿಗಲ್ಲ. ಹಿಗಿದ್ದವನು ಮೊನ್ನೆ ಬರೊಬ್ಬರಿ ಒಂದ್ ತಿಂಗಳು ವಾಟ್ಸ್ ಆಪ್ ನಲ್ಲಿ ಕಾಣಿಸಲಿಲ್ಲ, ಫೆಸ್ ಬುಕ್ ನಲ್ಲಿ ಸುಳಿವಿಲ್ಲ, ಕಾಲ್ ಮಾಡಿದ್ರೆ ರಿಂಗ್ ಆಗ್ತಿರಲಿಲ್ಲ ,ಅಪ್ಪಿ ತಪ್ಪಿ ರಿಂಗ್ ಆದ್ರೂ ರಿಸಿವ್ ಮಾಡ್ತಿರಲಿಲ್ಲ.
ಒಂದ್ ತಿಂಗಳ ನಂತರ ಭೇಟಿಯಾದ. ನಾನವನಿಗೆ, ಎಲ್ಲಿ ಹೋಗಿದ್ದೆ ? ಹೇಗಿದ್ದೆ ? ಏನ್ ಮಾಡ್ತಿದ್ದೆ ? ಎನೂ ಕೇಳಲಿಲ್ಲ. ನಾನ್ ಕೇಳಿದ್ದು ಒಂದೆ ಮಾತು, ಅಲ್ಲೊ ಮಾರಾಯ ಇಂಟರ್ನೆಟ್ ವಾಟ್ಸ್ ಆಪ್ ಇರದೆ ತಿಂಗಳು ಗಟ್ಟಲೆ ಹೇಗ್ ಇರ್ತಿಯ ? ಅಂತ. ನೀಜಾ ಅಲ್ವಾ ? ಇವತ್ತಿನ ದಿನ ಸಣ್ಣೋರು ದೊಡ್ಡೋರು , ಗಂಡು ಹೆಣ್ಣು ಅನ್ನದೆ ಎಲ್ಲರಿಗೂ ಮೊಬೈಲ್ ಎಷ್ಟು ಇಂಪಾರ್ಡೆಂಟ್ ಇದೆ ಅಂತ. ಡ್ರಗ್ಸ್ ಗಿಂತಲೂ ಇದಕ್ಕೆ ಅಡಿಕ್ಟ್ ಆಗಿದಿವಿ. ಅಂಥದ್ರಲ್ಲಿ ಈತ ಒಂದೋಂದು ತಿಂಗಳು ಹೇಂಗ್ ಇರ್ತಾನೆ ಅಂತ ವಿಚಿತ್ರ ಅನಿಸ್ತು ನನಗೆ.
ಯಾರ್ ಜೊತೆನೂ ಜಾಸ್ತಿ ಮಾತಾಡದವನು ನನ್ನ ಜೊತೆ ಮಾತು ಆರಂಭಿಸಿದ.
ಕೇಳ್ ಸಿದ್ದು, ನಾನು ಚಿಕ್ಕವನಿದ್ದಾಗ ಮನೇಲಿ ತುಂಬ ಬಡತನ,ಕುಡುಕ ಅಪ್ಪ. ಸಂಸಾರದ ಹೊಣೆ ಹೊತ್ತ ನನ್ನವ್ವ ಹಸಿಗೂಸಾಗಿದ್ದ ನನಗೆ ನಮ್ಮ ಅಜ್ಜಿಯ ಹತ್ರ ಬಿಟ್ಟು, ದುಡಿಯೊಕೆ ಹೊಗ್ತಿದ್ಳು. ದಿನವೀಡಿ ನನ್ನನ್ನ ತಾಯಿಗಿಂತ ಹೆಚ್ಚು ಪ್ರೀತಿ ತೋರಸಿ ಬೆಳಿಸಿದ್ದು ನನ್ನಜ್ಜಿ. ನಾನ್ ತುಸು ದೊಡ್ಡೊನ್ ಆಗಿ ಓಣಿಯಲ್ಲಿನ ಗೆಳೆಯರ ಕೂಡ ಆಡೊಕೆ ಅಂತ ಹೊರಗಡೆ ಹೋದ್ರೆ, ನಾನು ಮನೆಗೆ ವಾಪಸ ಬರೊವರೆಗೂ ನನಗಿಷ್ಟದ ಅಡುಗೆ ಮಾಡಿ, ಬಾಗಿಲಲ್ಲಿ ಕಾಯ್ತಾ ನಿಲ್ಲೋಳು. ನನಗೆ ತನ್ನ ಕೈಯಾರ ಊಠ ಮಾಡಿಸಿ ನಂತರ ತಾನು ಊಣ್ಣೋಳು. ನಾನು ಹದಿನಾರನೆ ವಯಸ್ಸಲ್ಲಿದಾಗ ನನ್ನಜ್ಜಿ ತಿರಿಕೊಂಡ್ಳು. ಆ ಕಾಯುವಿಕೆ ಇರದೆ ಬದುಕುತಿಲ್ವಾ ? . ನಮ್ಮವ್ವ ಬೆಳಗ್ಗೆ ಕಸಕ್ಕೆ ಹೋಗುವಾಗ ಬಿಳಿ ಜೋಳದ ಬಿಸಿ ರೊಟ್ಟಿಗೆ ಉಪ್ಪು ಬಳ್ಳೊಳಿ ಹಾಕಿ ಕುಟ್ಟಿ ಮುಟಿಗೆ ಮಾಡಿ ಕೊಡತಿದ್ಳು. ಗುಂಡಿ ಇಲ್ದಿರೊ ಅಂಗಿ ,ಜಿಪ್ ಇಲ್ದಿರೊ ಚಡ್ಡಿ ಹಾಕ್ಕೊಂಡು, ಬರಿಗಾಲಲ್ಲಿ ಓಣಿಯ ಬಿದಿ ಸುತ್ತುತ್ತ ಆ ಮುಟಿಗೆ ತಿಂತಿದ್ರೆ , ಮುಖದಲ್ಲಿ ಅದೆಂಥಹ ಸಿರಿತನ ಗೊತ್ತಾ. ಇವತ್ತು ಆ ಕೈತುತ್ತು ಇಲ್ಡೆ ಬದುಕುತಿಲ್ವಾ ? ನನಗಿರೊನು ಒಬ್ಬನೆ ತಮ್ಮ . ನಾವು ಚಿಕ್ಕವರಿದ್ದಾಗ ತಮ್ಮ ನನ್ನ ಜೊತೆ ಆಟ ಆಡೋಕೆ ಅಂತ ನನ್ನ ಕೈ ಹಿಡ್ಕೊಂಡು ನನ್ನ ಹಿಂದೆ ಬಂದ್ರೆ ಆತನನ್ನ ಹೊಡೆದು ಮನೆಗೆ ಕಳಿಸಿ, ಸ್ನೇಹಿತರ ಜೋತೆ ಆಟ ಆಡೋಕೆ ಹೊಗ್ತಿದ್ದೆ. ಇವತ್ತು ನಾನಾಗೆ ಬಾ ಅಂತ ಕೈ ಚಾಚಿದರೂ ಬರದಷ್ಟು ಎತ್ತರ ಬೆಳೆದಿದಾನೆ. ಆ ತಮ್ಮನ ಆಟದ ಹಠ ಇಲ್ಲದೆ ಬದುಕುತಿಲ್ವಾ ? ಪತ್ರಿಕೊದ್ಯಮದಲ್ಲಿ ಡಿಗ್ರಿ ತಗೊಂಡು ಪತ್ರಕರ್ತ ಆಗ್ಭೇಕು ಅಂತ ಓದೊ ಹಠದಲ್ಲಿ ಮನೆ ಬಿಟ್ಟು ಬಂದು, ಪಿ ಯು ಸಿ ಸಹ ಪಾಸಾಗದೆ ಅನಕ್ಷರಸ್ತನಾಗಿ ಬದುಕುತಿಲ್ವಾ ? ಬೈ ಮಿಸ್ಸ್ ಆಗಿ ಬ್ಯಾಗಲ್ಲಿ ಯಾವುದೊ ಹುಡುಗಿ ಫೊಟೊ ಬಂದಿದಕ್ಕೆ ಅಪ್ಪನ ದ್ರಿಷ್ಟಿಯಲ್ಲಿ ನಂಬಿಕೆಹೀನನಾಗಿ ಬದುಕುತಿಲ್ವಾ ? ಸೋದರತ್ತೆ ಮಗಳ ಜೋತೆ ಮದುವೆ ಫಿಕ್ಸ್ ಆಗಿತ್ತು, ದಿನಾಲೂ ಫೋನನಲ್ಲಿ ರನ್ನ ಚಿನ್ನ ಅಂತ ಮಾತೂ ಮುಂದುವರೆದಿತ್ತು, ಒಂದು ಸಣ್ಣ ಅನಾರೋಗ್ಯ ದಿಂದ ಹಾಸಿಗೆ ಹಿಡಿದು ಮೇಲೆಳುವಷ್ಟರಲ್ಲಿ ಇನ್ನೊಬ್ಬನ ಕೈ ಹಿಡಿದು ಸಪ್ತಪದಿ ತುಳಿದು ಹೋದ ಅತ್ತೆ ಮಗಳಿಲ್ದೆ ಬದುಕುತಿಲ್ವಾ ? ದುಡಿಯೋಕೆ ಶುರು ಮಾಡಿ ಆರು ವರ್ಷ ಆಯ್ತು, ಬ್ಯಾಂಕ್ ಪಾಸ್ಸ್ ಬುಕ್ ಮಾಡಿಸಿ ಮೂರು ವರ್ಷ ಆಯ್ತು, ಒಂದೆ ಒಂದು ದಿನ ಬ್ಯಾಂಕ್ ಮುಖ ನೋಡದೆ, ಅಕ್ಕೌಂಟ್ ನಲ್ಲಿ ನಲವತ್ತು ಐವತ್ತು ರೂಪಾಯಿ ಬ್ಯಾಲೆನ್ಸ್ ಇಟ್ಕೊಂಡು ಬದುಕುತಿಲ್ವಾ ? ಸಿದ್ದು ಭಾಯ್ ಹೀಗೆ ಹೇಳ್ತಾ ಹೋದ್ರೆ ಬೆಳಗಾಗುತ್ತೆ ಇಷ್ಟೆ ಸಾಕು. ಎನೆಲ್ಲ ಇಲ್ದೆ ಬದುಕ್ತಿದಿನಿ ಅಪ್ಟ್ರಾಲ್ ತಿಂಗಳೊಪ್ಪತ್ತು ನೆಟ್ ವಾಟ್ಸ್ ಆಪ್ ಇರದೆ ಬದುಕೋದು ಏನ್ ಮಹಾ ಅಂದ ಆತನ ಕಣ್ಣಲ್ಲಿ ನಗು, ಕೇಳ್ತಾ ನಿಂತಿದ್ದ ನನ್ನ ಕಣ್ಣಲ್ಲಿ ನೀರು.
ಅಲ್ಲೊ ಶಿವು, ಬ್ಯಾಕಲ್ಲಿ ಇಷ್ಟೆಲ್ಲ ಇದ್ರೂ ಫೇಸ್ ಮೇಲೆ ಸೆವೆಂಟಿ ಎಮ್ ಎಮ್ ಸ್ಮೈಲ್ ಹೇಗೆ ? ಎಂದು ಪ್ರಶ್ನಿಸಿದೆ ನಾನು. ಆಗ ಆತ ಕೊಟ್ಟ ಉತ್ತರ ಇನ್ನೂ ಅದ್ಭುತ.
ಈ ನಗುವಿಗೆ ಕಾರಣ, ನಡೆದಾಡುವ ದೇವರು ಶ್ರೀ ಸಿದ್ದೆಶ್ವರ ಅಪ್ಪಾಜಿಯವರ ಆ ಮಾತು. ನಾನ್ ಒಂದ್ ದಿನ ಅವರ ಪ್ರವಚನ ಕೇಳ್ತಿದ್ದೆ, ಆಗ ಅವರು ಹೇಳಿದ ಆ ಮಾತು ನನ್ನನ್ನೆ ಉದ್ದೇಶಿಸಿ ಹೇಳ್ತಿರೊ ಹಾಗಿತ್ತು. ಜೀವನ ಅನ್ನೋದು ಒಂದು ಪ್ರಯಾಣ ,ಪ್ರಯಾಣ ದ ರಸ್ತೆ ಮೇಲೆ ತೆಗ್ಗು ಗುಂಡಿ ಸಾಮಾನ್ಯ. ನಮಗೆ ಆ ರಸ್ತೆಯನ್ನ ರಿಪೆರಿ ಮಾಡೋಕೆ ಸಾದ್ಯ ಆದ್ರೆ, ಅದನ್ನ ರಿಪೇರಿ ಮಾಡಿ ಅದರ ಮೇಲೆ ನಡಿಬೇಕು, ಇಲ್ಲ ಅಂದ್ರೆ ಅದೆ ತಗ್ಗು ಗುಂಡಿಗಳ ರಸ್ತೆಯ ಮೇಲೆ ನಡೆಯೋಕೆ ಕಲಿಬೇಕು. ಅದನ್ನ ಬಿಟ್ಟು ನಮ್ ರಸ್ತೆ ಸರಿಯಿಲ್ಲ ಅಂತ ಕೊರಗತಾ ಕೂತ್ರೆ ವ್ಯೆರ್ಥ ಅಂತ. ಅವತ್ತಿಂದ ನಾನು ನನ್ನ ಜೀವನದಲ್ಲಿ ಏನೆ ಸಮಸ್ಯೆ ಬಂದ್ರೂ ಕುಗ್ಗಿಲ್ಲ, ಕೊರಗಿಲ್ಲ. ನನ ಕಡೆ ಸರಿ ಪಡಿಸೊಕೆ ಸಾದ್ಯ ಆದ ಸಮಸ್ಯಗಳನ್ನ ಸರಿ ಪಡಿಸ್ಕೊಂದಿನಿ, ಸರಿ ಪಡಿಸೋಕೆ ಆಗದ ಸಮಸ್ಯಗಳ ಜೋತೆ ಬದುಕೋಕೆ ಕಲ್ತಿದಿನಿ ಅಂದು , ಮೆಲ್ಲೆಗೆ ಮುಗುಳ್ನಕ್ಕ. ನನ್ ಬಾಯಲ್ಲಿ ಮಾತೇ ಬರಲಿಲ್ಲ.
ಸಿದ್ದು.ತಾಂಬೆ.
ಒಂದ್ ತಿಂಗಳ ನಂತರ ಭೇಟಿಯಾದ. ನಾನವನಿಗೆ, ಎಲ್ಲಿ ಹೋಗಿದ್ದೆ ? ಹೇಗಿದ್ದೆ ? ಏನ್ ಮಾಡ್ತಿದ್ದೆ ? ಎನೂ ಕೇಳಲಿಲ್ಲ. ನಾನ್ ಕೇಳಿದ್ದು ಒಂದೆ ಮಾತು, ಅಲ್ಲೊ ಮಾರಾಯ ಇಂಟರ್ನೆಟ್ ವಾಟ್ಸ್ ಆಪ್ ಇರದೆ ತಿಂಗಳು ಗಟ್ಟಲೆ ಹೇಗ್ ಇರ್ತಿಯ ? ಅಂತ. ನೀಜಾ ಅಲ್ವಾ ? ಇವತ್ತಿನ ದಿನ ಸಣ್ಣೋರು ದೊಡ್ಡೋರು , ಗಂಡು ಹೆಣ್ಣು ಅನ್ನದೆ ಎಲ್ಲರಿಗೂ ಮೊಬೈಲ್ ಎಷ್ಟು ಇಂಪಾರ್ಡೆಂಟ್ ಇದೆ ಅಂತ. ಡ್ರಗ್ಸ್ ಗಿಂತಲೂ ಇದಕ್ಕೆ ಅಡಿಕ್ಟ್ ಆಗಿದಿವಿ. ಅಂಥದ್ರಲ್ಲಿ ಈತ ಒಂದೋಂದು ತಿಂಗಳು ಹೇಂಗ್ ಇರ್ತಾನೆ ಅಂತ ವಿಚಿತ್ರ ಅನಿಸ್ತು ನನಗೆ.
ಯಾರ್ ಜೊತೆನೂ ಜಾಸ್ತಿ ಮಾತಾಡದವನು ನನ್ನ ಜೊತೆ ಮಾತು ಆರಂಭಿಸಿದ.
ಕೇಳ್ ಸಿದ್ದು, ನಾನು ಚಿಕ್ಕವನಿದ್ದಾಗ ಮನೇಲಿ ತುಂಬ ಬಡತನ,ಕುಡುಕ ಅಪ್ಪ. ಸಂಸಾರದ ಹೊಣೆ ಹೊತ್ತ ನನ್ನವ್ವ ಹಸಿಗೂಸಾಗಿದ್ದ ನನಗೆ ನಮ್ಮ ಅಜ್ಜಿಯ ಹತ್ರ ಬಿಟ್ಟು, ದುಡಿಯೊಕೆ ಹೊಗ್ತಿದ್ಳು. ದಿನವೀಡಿ ನನ್ನನ್ನ ತಾಯಿಗಿಂತ ಹೆಚ್ಚು ಪ್ರೀತಿ ತೋರಸಿ ಬೆಳಿಸಿದ್ದು ನನ್ನಜ್ಜಿ. ನಾನ್ ತುಸು ದೊಡ್ಡೊನ್ ಆಗಿ ಓಣಿಯಲ್ಲಿನ ಗೆಳೆಯರ ಕೂಡ ಆಡೊಕೆ ಅಂತ ಹೊರಗಡೆ ಹೋದ್ರೆ, ನಾನು ಮನೆಗೆ ವಾಪಸ ಬರೊವರೆಗೂ ನನಗಿಷ್ಟದ ಅಡುಗೆ ಮಾಡಿ, ಬಾಗಿಲಲ್ಲಿ ಕಾಯ್ತಾ ನಿಲ್ಲೋಳು. ನನಗೆ ತನ್ನ ಕೈಯಾರ ಊಠ ಮಾಡಿಸಿ ನಂತರ ತಾನು ಊಣ್ಣೋಳು. ನಾನು ಹದಿನಾರನೆ ವಯಸ್ಸಲ್ಲಿದಾಗ ನನ್ನಜ್ಜಿ ತಿರಿಕೊಂಡ್ಳು. ಆ ಕಾಯುವಿಕೆ ಇರದೆ ಬದುಕುತಿಲ್ವಾ ? . ನಮ್ಮವ್ವ ಬೆಳಗ್ಗೆ ಕಸಕ್ಕೆ ಹೋಗುವಾಗ ಬಿಳಿ ಜೋಳದ ಬಿಸಿ ರೊಟ್ಟಿಗೆ ಉಪ್ಪು ಬಳ್ಳೊಳಿ ಹಾಕಿ ಕುಟ್ಟಿ ಮುಟಿಗೆ ಮಾಡಿ ಕೊಡತಿದ್ಳು. ಗುಂಡಿ ಇಲ್ದಿರೊ ಅಂಗಿ ,ಜಿಪ್ ಇಲ್ದಿರೊ ಚಡ್ಡಿ ಹಾಕ್ಕೊಂಡು, ಬರಿಗಾಲಲ್ಲಿ ಓಣಿಯ ಬಿದಿ ಸುತ್ತುತ್ತ ಆ ಮುಟಿಗೆ ತಿಂತಿದ್ರೆ , ಮುಖದಲ್ಲಿ ಅದೆಂಥಹ ಸಿರಿತನ ಗೊತ್ತಾ. ಇವತ್ತು ಆ ಕೈತುತ್ತು ಇಲ್ಡೆ ಬದುಕುತಿಲ್ವಾ ? ನನಗಿರೊನು ಒಬ್ಬನೆ ತಮ್ಮ . ನಾವು ಚಿಕ್ಕವರಿದ್ದಾಗ ತಮ್ಮ ನನ್ನ ಜೊತೆ ಆಟ ಆಡೋಕೆ ಅಂತ ನನ್ನ ಕೈ ಹಿಡ್ಕೊಂಡು ನನ್ನ ಹಿಂದೆ ಬಂದ್ರೆ ಆತನನ್ನ ಹೊಡೆದು ಮನೆಗೆ ಕಳಿಸಿ, ಸ್ನೇಹಿತರ ಜೋತೆ ಆಟ ಆಡೋಕೆ ಹೊಗ್ತಿದ್ದೆ. ಇವತ್ತು ನಾನಾಗೆ ಬಾ ಅಂತ ಕೈ ಚಾಚಿದರೂ ಬರದಷ್ಟು ಎತ್ತರ ಬೆಳೆದಿದಾನೆ. ಆ ತಮ್ಮನ ಆಟದ ಹಠ ಇಲ್ಲದೆ ಬದುಕುತಿಲ್ವಾ ? ಪತ್ರಿಕೊದ್ಯಮದಲ್ಲಿ ಡಿಗ್ರಿ ತಗೊಂಡು ಪತ್ರಕರ್ತ ಆಗ್ಭೇಕು ಅಂತ ಓದೊ ಹಠದಲ್ಲಿ ಮನೆ ಬಿಟ್ಟು ಬಂದು, ಪಿ ಯು ಸಿ ಸಹ ಪಾಸಾಗದೆ ಅನಕ್ಷರಸ್ತನಾಗಿ ಬದುಕುತಿಲ್ವಾ ? ಬೈ ಮಿಸ್ಸ್ ಆಗಿ ಬ್ಯಾಗಲ್ಲಿ ಯಾವುದೊ ಹುಡುಗಿ ಫೊಟೊ ಬಂದಿದಕ್ಕೆ ಅಪ್ಪನ ದ್ರಿಷ್ಟಿಯಲ್ಲಿ ನಂಬಿಕೆಹೀನನಾಗಿ ಬದುಕುತಿಲ್ವಾ ? ಸೋದರತ್ತೆ ಮಗಳ ಜೋತೆ ಮದುವೆ ಫಿಕ್ಸ್ ಆಗಿತ್ತು, ದಿನಾಲೂ ಫೋನನಲ್ಲಿ ರನ್ನ ಚಿನ್ನ ಅಂತ ಮಾತೂ ಮುಂದುವರೆದಿತ್ತು, ಒಂದು ಸಣ್ಣ ಅನಾರೋಗ್ಯ ದಿಂದ ಹಾಸಿಗೆ ಹಿಡಿದು ಮೇಲೆಳುವಷ್ಟರಲ್ಲಿ ಇನ್ನೊಬ್ಬನ ಕೈ ಹಿಡಿದು ಸಪ್ತಪದಿ ತುಳಿದು ಹೋದ ಅತ್ತೆ ಮಗಳಿಲ್ದೆ ಬದುಕುತಿಲ್ವಾ ? ದುಡಿಯೋಕೆ ಶುರು ಮಾಡಿ ಆರು ವರ್ಷ ಆಯ್ತು, ಬ್ಯಾಂಕ್ ಪಾಸ್ಸ್ ಬುಕ್ ಮಾಡಿಸಿ ಮೂರು ವರ್ಷ ಆಯ್ತು, ಒಂದೆ ಒಂದು ದಿನ ಬ್ಯಾಂಕ್ ಮುಖ ನೋಡದೆ, ಅಕ್ಕೌಂಟ್ ನಲ್ಲಿ ನಲವತ್ತು ಐವತ್ತು ರೂಪಾಯಿ ಬ್ಯಾಲೆನ್ಸ್ ಇಟ್ಕೊಂಡು ಬದುಕುತಿಲ್ವಾ ? ಸಿದ್ದು ಭಾಯ್ ಹೀಗೆ ಹೇಳ್ತಾ ಹೋದ್ರೆ ಬೆಳಗಾಗುತ್ತೆ ಇಷ್ಟೆ ಸಾಕು. ಎನೆಲ್ಲ ಇಲ್ದೆ ಬದುಕ್ತಿದಿನಿ ಅಪ್ಟ್ರಾಲ್ ತಿಂಗಳೊಪ್ಪತ್ತು ನೆಟ್ ವಾಟ್ಸ್ ಆಪ್ ಇರದೆ ಬದುಕೋದು ಏನ್ ಮಹಾ ಅಂದ ಆತನ ಕಣ್ಣಲ್ಲಿ ನಗು, ಕೇಳ್ತಾ ನಿಂತಿದ್ದ ನನ್ನ ಕಣ್ಣಲ್ಲಿ ನೀರು.
ಅಲ್ಲೊ ಶಿವು, ಬ್ಯಾಕಲ್ಲಿ ಇಷ್ಟೆಲ್ಲ ಇದ್ರೂ ಫೇಸ್ ಮೇಲೆ ಸೆವೆಂಟಿ ಎಮ್ ಎಮ್ ಸ್ಮೈಲ್ ಹೇಗೆ ? ಎಂದು ಪ್ರಶ್ನಿಸಿದೆ ನಾನು. ಆಗ ಆತ ಕೊಟ್ಟ ಉತ್ತರ ಇನ್ನೂ ಅದ್ಭುತ.
ಈ ನಗುವಿಗೆ ಕಾರಣ, ನಡೆದಾಡುವ ದೇವರು ಶ್ರೀ ಸಿದ್ದೆಶ್ವರ ಅಪ್ಪಾಜಿಯವರ ಆ ಮಾತು. ನಾನ್ ಒಂದ್ ದಿನ ಅವರ ಪ್ರವಚನ ಕೇಳ್ತಿದ್ದೆ, ಆಗ ಅವರು ಹೇಳಿದ ಆ ಮಾತು ನನ್ನನ್ನೆ ಉದ್ದೇಶಿಸಿ ಹೇಳ್ತಿರೊ ಹಾಗಿತ್ತು. ಜೀವನ ಅನ್ನೋದು ಒಂದು ಪ್ರಯಾಣ ,ಪ್ರಯಾಣ ದ ರಸ್ತೆ ಮೇಲೆ ತೆಗ್ಗು ಗುಂಡಿ ಸಾಮಾನ್ಯ. ನಮಗೆ ಆ ರಸ್ತೆಯನ್ನ ರಿಪೆರಿ ಮಾಡೋಕೆ ಸಾದ್ಯ ಆದ್ರೆ, ಅದನ್ನ ರಿಪೇರಿ ಮಾಡಿ ಅದರ ಮೇಲೆ ನಡಿಬೇಕು, ಇಲ್ಲ ಅಂದ್ರೆ ಅದೆ ತಗ್ಗು ಗುಂಡಿಗಳ ರಸ್ತೆಯ ಮೇಲೆ ನಡೆಯೋಕೆ ಕಲಿಬೇಕು. ಅದನ್ನ ಬಿಟ್ಟು ನಮ್ ರಸ್ತೆ ಸರಿಯಿಲ್ಲ ಅಂತ ಕೊರಗತಾ ಕೂತ್ರೆ ವ್ಯೆರ್ಥ ಅಂತ. ಅವತ್ತಿಂದ ನಾನು ನನ್ನ ಜೀವನದಲ್ಲಿ ಏನೆ ಸಮಸ್ಯೆ ಬಂದ್ರೂ ಕುಗ್ಗಿಲ್ಲ, ಕೊರಗಿಲ್ಲ. ನನ ಕಡೆ ಸರಿ ಪಡಿಸೊಕೆ ಸಾದ್ಯ ಆದ ಸಮಸ್ಯಗಳನ್ನ ಸರಿ ಪಡಿಸ್ಕೊಂದಿನಿ, ಸರಿ ಪಡಿಸೋಕೆ ಆಗದ ಸಮಸ್ಯಗಳ ಜೋತೆ ಬದುಕೋಕೆ ಕಲ್ತಿದಿನಿ ಅಂದು , ಮೆಲ್ಲೆಗೆ ಮುಗುಳ್ನಕ್ಕ. ನನ್ ಬಾಯಲ್ಲಿ ಮಾತೇ ಬರಲಿಲ್ಲ.
ಸಿದ್ದು.ತಾಂಬೆ.
This comment has been removed by the author.
ReplyDeleteನಾವು ಏನೆಲ್ಲಾ ಕಳ್ಕೊಂಡು ಬದುಕುತ್ತಿದ್ದೇವೆ. ಯಾವುದನ್ನು ಜಾಸ್ತಿ ಮನಸಿಗೆ ಹಚ್ಕೊಳ್ಳದೆ ಮುಂದೆ ನುಗ್ಗುತಾ ಇರಬೇಕು ಅಂತ. ತುಂಬಾ ಚೆನ್ನಾಗಿ ಮನ ಮುಟ್ಟೊ ಹಾಗೆ ಹೇಳಿದಿರಾ ಅಣ್ಣ.. ಅಧ್ಬುತ ಬರಹ..👌👌
ReplyDeletethank U viresh brother
DeleteMeaning full short story
ReplyDeletethank U
DeleteAnna idu nijavada maatu .yesto mugdamasin novin nagu ansutte anna .nice
ReplyDeletethank U
Deletereally very meaningful article brother
ReplyDelete